More

    ಗುಂಡಿ ಬಿದ್ದ ರಸ್ತೆಗೆ ಇಂಟರ್‌ಲಾಕ್ ಅಳವಡಿಕೆ

    ಕೊಪ್ಪ: ಗುಂಡಿ ಬಿದ್ದ ಪಟ್ಟಣ ಮಾರ್ಕೆಟ್ ರಸ್ತೆಯನ್ನು ದುರಸ್ತಿ ಪಡಿಸದೇ ಪಟ್ಟಣ ಪಂಚಾಯಿತಿ ರಸ್ತೆ ಬದಿಗೆ ಇಂಟರ್‌ಲಾಕ್ ಅಳವಡಿಕೆಗೆ ಕಾಮಗಾರಿ ನಡೆಸುತ್ತಿದ್ದು, ಸಾರ್ವಜನಿಕರು ಮೊದಲು ರಸ್ತೆ ದುರಸ್ತಿ ಮಾಡಿ ನಂತರ ಇಂಟರ್ ಲಾಕ್ ಅಳವಡಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
    ಕೊಪ್ಪ ಪಟ್ಟಣದ ಹಲವು ಭಾಗದಲ್ಲಿ ಹಿಂದಿನ ಬಿಜೆಪಿ ಸರ್ಕಾರ ನಗರೋತ್ತನ ಯೋಜನೆಯಡಿ ಮಂಜೂರು ಮಾಡಿದ ಅನುದಾನದಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಆದರೇ ಮಾರ್ಕೆಟ್ ರಸ್ತೆ, ಲಾಲ್ ಬಹದ್ದೂರ್ ಶಾಸೀ ಕ್ರೀಡಾಂಗಣದ ಪಕ್ಕದ ರಸ್ತೆ ಸಂಪೂರ್ಣ ಹಾಳಾಗಿದ್ದು. ರಸ್ತೆ ದುರಸ್ತಿ ಮಾಡದೇ ಇಂಟರ್‌ಲಾಕ್ ಅಳವಡಿಸಿ ಏನು ಪ್ರಯೋಜನ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
    ಕರವೇ ಅಧ್ಯಕ್ಷ ಪ್ರಾನ್ಸಿಸ್ ಕಾಡೋಜ ಮಾತನಾಡಿ, ರಸ್ತೆ ದುರಸ್ತಿಗೆ ಹಣ ಮೀಸಲಿಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೇ, ಇದುವರೆಗೂ ಕೆಲಸವಾಗಿಲ್ಲ. ರಸ್ತೆಗೆ ಡಂಬಾರ್ ಹಾಕಿ ನಂತರದಲ್ಲಿ ಇಂಟರ್‌ಲಾಕ್ ಆಳವಡಿಸ ಬಹುದಿತ್ತು. ಈ ಕಾಮಗಾರಿ ಮುದುಕಿಗೆ ಸಿಂಗಾರ ಮಾಡಿದಂತಾಗಿದೆ ಎಂದು ಲೇವಡಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts