More

    ವೀರ ಸಿಂಧೂರ ಲಕ್ಷ್ಮಣ ಮೂರ್ತಿ ಪ್ರತಿಷ್ಠಾಪಿಸಿ

    ಮುಂಡರಗಿ: ಪಟ್ಟಣದ ಸ್ವಾತಂತ್ರೃ ಸೇನಾನಿ ವೀರ ಸಿಂಧೂರ ಲಕ್ಷ್ಮಣ ವೃತ್ತದಲ್ಲಿ ಸೋಮವಾರ ವೀರ ಸಿಂಧೂರ ಲಕ್ಷ್ಮಣ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

    ವಾಲ್ಮೀಕಿ ಸಮಾಜದ ಶಹರ ಘಟಕದ ಅಧ್ಯಕ್ಷ ವೆಂಕಟೇಶ ಬಂಡೆಣ್ಣವರ ಮಾತನಾಡಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸಿಂಧೂರ ಲಕ್ಷ್ಮಣ ದೇಶದ ಸ್ವಾತಂತ್ರೃಕ್ಕಾಗಿ ಕ್ರಾಂತಿಕಾರಿಯಾಗಿ ಹೋರಾಟ ಮಾಡಿದ್ದರು. ಪ್ರತಿಯೊಬ್ಬರಿಂದಲೂ ಅವರನ್ನು ಸ್ಮರಿಸುವ ಕೆಲಸ ಆಗಬೇಕು ಎಂದರು.
    ಸುರೇಶ ನಾಯ್ಕರ ಮಾತನಾಡಿ, 23 ವರ್ಷಗಳ ಹಿಂದೆ ಇಲ್ಲಿ ವೀರ ಸಿಂಧೂರ ಲಕ್ಷ್ಮಣ ವೃತ್ತ ನಿರ್ಮಿಸಲಾಗಿದೆ. ಆದರೆ, ಈವರೆಗೂ ವೀರ ಸಿಂಧೂರ ಲಕ್ಷ್ಮಣ ಮೂರ್ತಿ ಪ್ರತಿಷ್ಠಾಪನೆ ಆಗಿಲ್ಲ. ಪುರಸಭೆಯವರು ಮೂರ್ತಿ ಪ್ರತಿಷ್ಠಾಪನೆಗೆ ಅನುಕೂಲ ಮಾಡಿಕೊಡಬೇಕು ಎಂದರು.

    ನಿವೃತ್ತ ಉಪನ್ಯಾಸಕ ಬಿ.ಎಫ್. ಈಟಿ, ಕನಕಪ್ಪ ಕಾತರಕಿ, ದ್ಯಾಮಣ್ಣ ವಾಲೀಕಾರ, ಶ್ರೀನಿವಾಸ ಕೊರ್ಲಗಟ್ಟಿ, ಚನ್ನಪ್ಪ ಹಳ್ಳಿ, ಶಂಕರ ಕುಕನೂರ, ವಿಜಯಕುಮಾರ ಬಣಕಾರ, ದ್ಯಾಮಣ್ಣ ಮಾದಾಪುರ, ಪ್ರವೀಣ, ಮೇಘರಾಜ ನಾಯಕ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts