ಸಿರವಾರ: ಹರವಿ ಗ್ರಾಮದ ಆರಾಧ್ಯ ದೈವ ಬಸವೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಸೋಮವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ರಥೋತ್ಸವ ಜರುಗಿತು. ಬೆಳಗ್ಗೆ ಬಸವೇಶ್ವರ, ವೀರಭದ್ರೇಶ್ವರ ಹಾಗೂ ಇತರ ಮೂರ್ತಿಗಳಿಗೆ ಪೂಜೆ, ಅಭಿಷೇಕ, ನೈವೇದ್ಯ ಅರ್ಪಣೆ, ಅಲಂಕಾರ ಸೇವೆ ನಡೆಯಿತು. ಭಕ್ತರು ಹರಕೆ ತೀರಿಸಿದರು.