ಮುಂಡರಗಿ: ತಾಲೂಕಿನ ನಾಗರಹಳ್ಳಿ ಗ್ರಾಮಕ್ಕೆ ಬಿಇಒ ಆರ್.ಆರ್. ಸದಲಗಿ ಅವರು ಶುಕ್ರವಾರ ಭೇಟಿ ನೀಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡವನ್ನು ಪರಿಶೀಲಿಸಿದರು.
ಶಾಲೆಯ ಗೇಟ್ಗಳನ್ನು ಎಸ್ಡಿಎಂಸಿಯವರು ಹಾಗೂ ಶಾಲೆ ಮುಖ್ಯಶಿಕ್ಷಕರು ದುರಸ್ತಿಪಡಿಸಬೇಕು. ಕಟ್ಟಡದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಳೇ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದ್ದು, ಸದ್ಯ ಕೋವಿಡ್-19ರ ಹಿನ್ನೆಲೆಯಲ್ಲಿ ಮಕ್ಕಳು ಬರುತ್ತಿಲ್ಲ. ಹೀಗಾಗಿ ಇಬ್ಬರು ಶಿಕ್ಷಕರು ಹಳೇ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಗ್ರಾಮಸ್ಥರು ಅನವಶ್ಯಕವಾಗಿ ಶಾಲೆಯ ಹಳೇ ಕಟ್ಟಡದಲ್ಲಿ ಕುಳಿತುಕೊಳ್ಳುವುದು, ಬೇರೆ-ಬೇರೆ ಚಟುವಟಿಕೆಗಳಿಗೆ ಬಳಸದಂತೆ ಎಸ್ಡಿಎಂಸಿಯವರು ನಿಗಾ ವಹಿಸಬೇಕು ಎಂದು ಬಿಇಒ ಸೂಚಿಸಿದರು.
ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಬಿಇಒ, ‘ಶಾಲೆ ಪ್ರಾರಂಭಗೊಂಡ ನಂತರ ನಲಿ-ಕಲಿ ತರಗತಿಗಳನ್ನು ಹಳೆಯ ಕಟ್ಟಡದಲ್ಲಿ ನಡೆಸಬೇಕು ಎಂದು ನಿರ್ಧರಿಸಲಾಗಿದೆ. ಜತೆಗೆ ಕಟ್ಟಡದಲ್ಲಿ ಸ್ವಚ್ಛತೆ ಮತ್ತು ಸದ್ಭಳಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಗಂಗಾಧರ ಅಣ್ಣಿಗೇರಿ, ಬಿಆರ್ಪಿ ಆರ್.ಎಲ್. ಬದಾಮಿ, ಮುಖ್ಯಶಿಕ್ಷಕಿ ಸಿ.ಎಸ್. ಹಳ್ಳಿಕೇರಿ, ಸಿಆರ್ಪಿ ಐ.ಎಸ್. ಮುಲ್ಲಾ ಉಪಸ್ಥಿತರಿದ್ದರು.
‘ಶಾಲೆಯ ಹಳೇ ಕಟ್ಟಡ ದುರ್ಬಳಕೆ’ ಶೀರ್ಷಿಕೆಯಡಿ ನ. 27ರಂದು ‘ವಿಜಯವಾಣಿ’ಯಲ್ಲಿ ವಿಸõತ ವರದಿ ಪ್ರಕಟಿಸಲಾಗಿತ್ತು.