More

    ಶ್ರಮಜೀವಿಯಾದರೆ ಗುರಿ ಸಾಧಿಸಲು ಸಾಧ್ಯ

    ಕಂಪ್ಲಿ: ಅವಿರತ ಪರಿಶ್ರಮದ ಪ್ರತೀಕವೇ ಭಗೀರಥ ಮಹರ್ಷಿ ಎಂದು ತಹಸೀಲ್ದಾರ್ ಶಿವರಾಜ ಹೇಳಿದರು.

    ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸಾಧ್ಯವಾದದ್ದನ್ನು ಸಾಧಿಸಬಹುದು ಎಂಬುದು ಭಗೀರಥ ಮಹರ್ಷಿ ಜೀವನದ ಸಂದೇಶವಾಗಿದೆ.

    ಇದನ್ನು ಓದಿ:ಭಗೀರಥ ಮಹರ್ಷಿ, ಛಲ ಮತ್ತು ದೃಢ ಸಂಕಲ್ಪದ ಪ್ರತೀಕ

    ಪ್ರತಿಯೊಬ್ಬರೂ ಶ್ರಮಜೀವಿಯಾದಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ. ನಿತ್ಯ ಜೀವನದಲ್ಲಿ ಭಗೀರಥ ಮಹರ್ಷಿಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಉಪ್ಪಾರ ದೊಡ್ಡ ಬಸಪ್ಪ ಮಾತನಾಡಿ, ಉಪ್ಪಾರ ಸಮುದಾಯದ ಚಟುವಟಿಕೆಗಳಿಗೆ ಸಮುದಾಯ ಭವನ ನಿರ್ಮಿಸುವ ಅಗತ್ಯವಿದ್ದು, ತಾಲೂಕು ಆಡಳಿತ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಕೆ.ಗೋವಿಂದಪ್ಪ, ಉಪ್ಪಾರಲಕ್ಷ್ಮೀ, ಪಂಪಾಪತಿ, ಯು.ಸ್ವಾಮಿ, ವೆಂಕಟಪತಿ, ವೆಂಕಟೇಶ, ನಾಗರಾಜ, ಗೋಪಾಲ್, ಆನಂದಪ್ಪ, ಮುನಿಯಪ್ಪ, ನಾರಾಯಣಪ್ಪ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts