ಭಾರತ ಟೆಸ್ಟ್ ತಂಡದ ಉಪನಾಯಕತ್ವ ಸ್ಥಾನದಿಂದ ರಹಾನೆಗೆ ಕೊಕ್?

blank

ನವದೆಹಲಿ: ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ, ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಗಳಿದ್ದರೂ ಉಪನಾಯಕತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಬುಧವಾರ 20 ಸದಸ್ಯರ ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಜನವರಿ 19 ರಿಂದ ಆರಂಭವಾಗಲಿರುವ ಏಕದಿನ ಸರಣಿಗೆ ತಂಡದ ಆಯ್ಕೆ ತಡವಾಗಲಿದೆ ಎಂದು ತಿಳಿದು ಬಂದಿದೆ. ಮುಂಬೈನಲ್ಲಿ ನ್ಯೂಜಿಲೆಂಡ್ ಎದುರು ನಡೆದ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಗಾಯದ ಸಮಸ್ಯೆ ಎಂದು ಹೇಳಲಾಗಿದ್ದರೂ ಸತತ 12 ಇನಿಂಗ್ಸ್‌ಗಳಲ್ಲಿ ರಹಾನೆ ವೈಫಲ್ಯಗೊಂಡಿದ್ದರು.

ರಹಾನೆ ಉಪನಾಯಕತ್ವ ಕಳೆದುಕೊಂಡರೆ, ಮುಂಬೈನವರೇ ಆದ ರೋಹಿತ್ ಶರ್ಮ ಅವರಿಗೆ ಈ ಸ್ಥಾನ ಒಲಿಯುವ ಸಾಧ್ಯತೆಗಳಿವೆ. 100 ಟೆಸ್ಟ್ ಪಂದ್ಯಗಳನ್ನಾಡಿದ್ದರೂ ನಿರೀಕ್ಷಿತ ನಿರ್ವಹಣೆ ತೋರಲು ವಿಫಲವಾಗುತ್ತಿರುವ ಇಶಾಂತ್ ಶರ್ಮ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಕನ್ನಡಿಗ ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಹನುಮ ವಿಹಾರಿ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿದ್ದು, ಪ್ರಿಯಾಂಕ್ ಪಾಂಚಾಲ್ ಅಥವಾ ಅಭಿಮನ್ಯು ಈಶ್ವರನ್ ಮೂರನೇ ಕ್ರಮಾಂಕಕ್ಕೆ ಬದಲಿ ಆಟಗಾರರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

Share This Article

ಮನೆಯಲ್ಲಿ ಚಪ್ಪಲಿ ಧರಿಸುವುದು ಒಳ್ಳೆಯದೇ? Slippers Inside Home

Slippers Inside Home:ಕೆಲವರು ಬರಿಗಾಲಿನಲ್ಲಿ ನಡೆಯುವ ಬದಲು ಮನೆಯೊಳಗೆ ಸ್ಯಾಂಡಲ್ ಧರಿಸುತ್ತಾರೆ. ದಿನವಿಡೀ ಸ್ಯಾಂಡಲ್ ಮತ್ತು…

ನೀವು ಸಿಹಿ ತಿಂದು ನಂತರ ನೀರು ಕುಡಿಯುತ್ತೀರಾ? ಇದನ್ನು ಮೊದಲು ತಿಳಿದುಕೊಳ್ಳಿ..Sweets and Drinking Water

ಬೆಂಗಳೂರು: (Sweets and Drinking Water) ರಸಗುಲ್ಲಾ, ಗುಲಾಬ್ ಜಾಮೂನ್, ಜಲೇಬಿ, ಸಂದೇಶ್, ಮೈಸೂರು ಪಾಕ್...…

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ಕಾಲ ಬಳಸಲು ಫ್ರಿಡ್ಜ್‌ನಲ್ಲಿ ಇಡಬಹುದೇ; ತಜ್ಞರು ಹೇಳುವುದೇನು? | Health Tips

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅನೇಕ ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಅವುಗಳನ್ನು ಸಂಗ್ರಹಿಸಲು ಇದು…