More

    ಉರಿ ಸೆಕ್ಟರ್​ನಲ್ಲಿ ಭಾರತೀಯ ಯೋಧರಿಂದ ಓರ್ವ ಉಗ್ರನ ಹತ್ಯೆ, ಮತ್ತೋರ್ವ ಶರಣಾಗತಿ

    ಶ್ರೀನಗರ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್​ನಲ್ಲಿ ನಡೆದ ಉಗ್ರರ ವಿರುದ್ಧ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಯೋಧರು ಓರ್ವ ಉಗ್ರನನ್ನ ಹತ್ಯೆಗೈದಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಉಗ್ರ ಶರಣಾಗಿದ್ದಾನೆಂದು ತಿಳಿದು ಬಂದಿದೆ.

    19 ವರ್ಷದ ಲಷ್ಕರ್​​-ಇ-ತೊಯ್ಬಾ ಉಗ್ರ ಸಂಘಟನೆ ಭಯೋತ್ಪಾದಕ ಎಂದು ತಿಳಿದು ಬಂದಿದೆ. ಬಂಧಿತ ಉಗ್ರನನ್ನ ಪಾಕಿಸ್ತಾನದ ಪಂಜಾಬ್​​ನ ಅಲಿ ಬಾಬರ್​ ಎಂದು ಗುರುತಿಸಲಾಗಿದೆ. ಆತ ಎಲ್​ಇಟಿ ಸದಸ್ಯನೆಂದು ಒಪ್ಪಿಕೊಂಡಿದ್ದಾಗಿ ಭಾರತೀಯ ಸೇನೆ ತಿಳಿಸಿದೆ.

    ಶ್ರೀನಗರದ ರಾಜೌರಿಕದಲ್​ ಪ್ರದೇಶದಲ್ಲಿ ಉಗ್ರರ ಅಡಗುತಾಣ ನಿರ್ಮಾಣ ಮಾಡಲು ಲಷ್ಕರ್​​-ಇ-ತೊಯ್ಬಾ ಕಮಾಂಡರ್​ ರಿಯಾಜ್​ ಸತರ್​ಗುಂಡ್​ನ ಆದೇಶ ನೀಡಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆಂದು ಮೇಜರ್ ಜನರಲ್ ವೀರೇಂದ್ರ ವಾಟ್ಸ್ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ಭಯೋತ್ಪಾದಕರು ಗಡಿಯೊಳಗೆ ನುಸುಳುವ ಯತ್ನ ಮಾಡ್ತಿದ್ದು, ಭಾರತೀಯ ಯೋಧರು ಅವರಿಗೆ ಸೂಕ್ತ ತಿರುಗೇಟು ನೀಡುತ್ತಿದ್ದಾರೆ.

    ‘ಹುಕ್ಕಾ ಬಾರ್​ ಅಂದ್ರೆ ಏನು, ಅದು ಹೇಗಿರುತ್ತೆ?’ ಎಂದು ಕೇಳಿ ಅಚ್ಚರಿ ಮೂಡಿಸಿದ ಗೃಹ ಸಚಿವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts