ನವದೆಹಲಿ: ಲಡಾಖ್ ಪೂರ್ವಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಂತೆ ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್.ಕೆ.ಎಸ್. ಬಹಾದ್ದೂರಿಯಾ ಲೇಹ್ ಮತ್ತು ಶ್ರೀನಗರದಲ್ಲಿರುವ ಸೇನಾಪಡೆಯ ವಾಯುನೆಲೆಗಳಿಗೆ ದಿಢೀರ್ ಭೇಟಿ ನೀಡಿ, ಸನ್ನದ್ಧತೆಯ ಕುರಿತು ಮಾಹಿತಿ ಪಡೆದುಕೊಂಡರು.
ಲೇಹ್ ಮತ್ತು ಶ್ರೀನಗರ ವಾಯುನೆಲೆಗಳು ಲಡಾಖ್ನ ಪೂರ್ವ ಭಾಗಕ್ಕೆ ತುಂಬಾ ಸಮೀಪದಲ್ಲಿವೆ. ಚೀನಾದಿಂದ ಆಕ್ರಮಣವಾದಲ್ಲಿ ತಕ್ಷಣವೇ ರಣರಂಗಕ್ಕೆ ಯುದ್ಧವಿಮಾನಗಳನ್ನು ರವಾನಿಸಲು ಅನುಕೂಲವಾಗಲಿದೆ.
ವಾಯುಪಡೆ ಮುಖ್ಯಸ್ಥರು ಜೂ.17ರಂದು ಶ್ರೀನಗರ ಮತ್ತು ಜೂ.18ರಂದು ಲೇಹ್ ವಾಯುನೆಲೆಗಳಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ, ಇದನ್ನು ಖಚಿತಪಡಿಸಲು ಭಾರತೀಯ ವಾಯುಪಡೆ ವಕ್ತಾರ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಘರ್ಷಣೆ ನಡುವೆಯೇ ಕಾಮಗಾರಿ; ಸಿದ್ಧವಾಯಿತು ಗಲ್ವಾನ್ ನದಿಯ ಸೇತುವೆ
ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಉಂಟಾದ ನಂತರದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಈ ಎರಡು ವಾಯುನೆಲೆಗಳಿಗೆ ವಾಯುಪಡೆ ಮುಖ್ಯಸ್ಥರನ್ನು ರವಾನಿಸಲು ಸರ್ಕಾರ ನಿರ್ಧರಿಸಿತು. ಅದಂತೆ ಅವರು ಅಲ್ಲಿಗೆ ಭೇಟಿ ನೀಡಿದರು ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಯುದ್ಧವಿಮಾನಗಳು, ಹೆಲಿಕಾಪ್ಟರ್ಗಳ ರವಾನೆ: ವಾಸ್ತವ ಗಡಿರೇಖೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಭಾರತ ಸುಖೋಯಿ-30ಎಂಕೆಐ, ಮಿರಾಜ್ 2000 ಮತ್ತು ಜಾಗ್ವಾರ್ ಯುದ್ಧವಿಮಾನಗಳನ್ನು ಲೇಹ್ ಮತ್ತು ಶ್ರೀನಗರ ವಾಯುನೆಲೆಗಳಲ್ಲಿ ನೆಲಗೊಳಿಸಿದೆ. ತುರ್ತು ಅಗತ್ಯ ಬಿದ್ದಲ್ಲಿ ಅವುಗಳನ್ನು ಗಡಿ ಪ್ರದೇಶಕ್ಕೆ ರವಾನಿಸಲು ಅನುಕೂಲವಾಗುವಂತೆ ಅವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಹೊಸದಾಗಿ ಖರೀದಿಸಲಾಗಿರುವ ಅಮೆರಿಕದ ಅಪಾಚೆ ಯುದ್ಧಹೆಲಿಕಾಪ್ಟರ್ಗಳನ್ನು ಲಡಾಖ್ನಲ್ಲಿ ನೆಲೆಗೊಳಿಸಲಾಗಿದೆ. ಚಿನೋಕ್ ಹೆಲಿಕಾಪ್ಟರ್ಗಳನ್ನು ಲೇಹ್ ವಾಯುನೆಲೆಯಲ್ಲಿ ನೆಲೆಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಅಭಿನವ್ ಮೇಲೆ ಮಾನನಷ್ಟ ಕೇಸ್ ಹಾಕಿದ ಸಲ್ಮಾನ್ ಸಹೋದರ