ಬೆಂಗಳೂರು: ಕೆರಿಬಿಯನ್ ನಾಡಿನಲ್ಲಿ ನಡೆಯಲಿರುವ ಭಾರತ&ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರಾಜ್ಯದ ಸೈಕಲ್ ಪ್ಯೂರ್ ಅಗರ್ಬತ್ತಿ ಸಂಸ್ಥೆ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿದೆ. ಉಭಯ ದೇಶಗಳು “್ರಾಂಕ್ ವೂರೆಲ್ ಟ್ರೋಫಿ’ಗಾಗಿ ಸಾಂಪ್ರದಾಯಿಕವಾಗಿ ಸೆಣಸುತ್ತಿದ್ದು, 2023ರ ಸರಣಿಯನ್ನು “ಸೈಕಲ್ ಪ್ಯೂರ್ ಅಗರಬತ್ತಿ ಸರಣಿ’ ಎಂದು ಕರೆಯಲಾಗುತ್ತದೆ.
ಟ್ರ್ರಿನಿಡಾಡ್ನ ಹೆಸರಾಂತ ಕ್ವೀನ್ಸ್ ಪಾರ್ಕ್ನ ಓವಲ್ನಲ್ಲಿ ಜು.20ರಿಂದ 24ರವರೆಗೆ ನಡೆಯಲಿರುವ 2ನೇ ಪಂದ್ಯ ಉಭಯ ರಾಷ್ಟ್ರಗಳ ನಡುವಿನ 100ನೇ ಟೆಸ್ಟ್ ಪಂದ್ಯವಾಗಿರುವುದರಿಂದ ಈ ಸರಣಿ ಐತಿಹಾಸಿಕ ಪ್ರಾಮುಖ್ಯತೆ ಪಡೆದುಕೊಂಡಿದೆ. 1948ರಲ್ಲಿ ದೆಹಲಿಯಲ್ಲಿ ಎರಡೂ ದೇಶಗಳ ನಡುವಿನ ಮೊದಲ ಪಂದ್ಯ ನಡೆದಿತ್ತು. ಜು.12ರಂದು ಸರಣಿ ಆರಂಭವಾಗಲಿದ್ದು, ಬಳಿಕ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿಯೂ ನಡೆಯಲಿದೆ.
“ಭಾರತದಲ್ಲಿ ಕ್ರಿಕೆಟ್ ಅನ್ನು ಧರ್ಮವಾಗಿ ಕಾಣುತ್ತಾರೆ. ಪ್ರಾರ್ಥನೆಯ ದ್ಯೋತಕವಾಗಿ ಹೊತ್ತಿಸುವ ಸೈಕಲ್ ಪ್ಯೂರ್ ಅಗರಬತ್ತಿಯಂತೆ ಗಡಿ, ಭಾಷೆ, ಸಂಸತಿ ಎಲ್ಲವನ್ನೂ ಮತ್ತು ಎಲ್ಲರನ್ನೂ ಮೀರಿ ಒಟ್ಟಿಗೆ ಸೇರಿಸುವ ಕ್ರೀಡೆಯಾಗಿದೆ. ಈ ಪ್ರಾಯೋಜಕತ್ವದ ಮೂಲಕ ಸೈಕಲ್ ಬ್ರಾ$್ಯಂಡ್ ಕೇವಲ ಆಟವನ್ನು ಬೆಂಬಲಿಸುವುದು ಮಾತ್ರವಲ್ಲ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಹರಡುವ ದೊಡ್ಡ ಉದ್ದೇಶಕ್ಕೆ ಕೊಡುಗೆ ನೀಡುತ್ತದೆ. ಕ್ರಿಕೆಟ್ನಂಥ ಆಟ ಸವಾಲಿನ ಸಮಯದಲ್ಲಿಯೂ ವ್ಯಕ್ತಿಗಳು, ಸಮುದಾಯ ಮತ್ತು ರಾಷ್ಟ್ರಗಳನ್ನು ಪ್ರೇರೇಪಿಸುವ ಮತ್ತು ಮೇಲೆಕ್ಕೆತ್ತುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸೈಕಲ್ ಪ್ಯೂರ್ ಅಗರಬತ್ತಿ ದೃಢವಾಗಿ ನಂಬುತ್ತದೆ’ ಎಂದು ಕಂಪನಿಯ ಎಂಡಿ ಅರ್ಜುನ್ ರಂಗ ತಿಳಿಸಿದ್ದಾರೆ.
“ಸೈಕಲ್ ಪ್ಯೂರ್ನಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮತ್ತು ಸಬಲೀಕರಣಗೊಳಿಸುವುದು ನಮ್ಮ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ. ಈ ಪಾಲುದಾರಿಕೆಯು ಏಕತೆಯ ಮೌಲ್ಯಗಳನ್ನು ಪ್ರಚಾರ ಮಾಡಲು ನಮಗೆ ಒಂದು ಅನನ್ಯ ಅವಕಾಶಗಳನ್ನು ಒದಗಿಸುತ್ತದೆ. 100ನೇ ಪಂದ್ಯವನ್ನು ವೀಸಲು ನನಗೂ ಕೂಡ ಕುತೂಹಲ ಇದೆ’ ಎಂದು ಅರ್ಜುನ್ ರಂಗ ತಿಳಿಸಿದ್ದಾರೆ.
ಏಕದಿನ ವಿಶ್ವಕಪ್: ಬೆಂಗಳೂರಿನಲ್ಲಿ ಟೀಮ್ ಇಂಡಿಯಾ ವಿರುದ್ಧ ಆಡುವ ಎದುರಾಳಿ ನಿರ್ಧಾರ