ನವದೆಹಲಿ: ಮದುವೆ ಸಮಾರಂಭದಲ್ಲಿ ಹಿಂದು ಮಹಿಳೆಯನ್ನು ಅಪಹರಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಪಾಕಿಸ್ತಾನ ಹೈಕಮಿಷನ್ನ ಹಿರಿಯ ಅಧಿಕಾರಿಗೆ ಸಮನ್ಸ್ ನೀಡಿದೆ.
ಎರಡು ದಿನಗಳ ಹಿಂದೆ ಸಿಂಧ್ ಪ್ರಾಂತ್ಯದ ಹಲಾ ನಗರದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಹಿಂದು ಮಹಿಳೆಯನ್ನು ಅಪಹರಿಸಲಾಗಿತ್ತು. ಆಕೆಗೆ ಈಗಾಗಲೇ ಪಾಕಿಸ್ತಾನದವನೊಂದಿಗೆ ಮದುವೆಯಾಗಿತ್ತು. ಇದಕ್ಕೆ ಆಕೆಯ ಮನೆಯವರ ವಿರೋಧವಿದ್ದು, ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಹರಣವನ್ನು ತೀವ್ರವಾಗಿ ಖಂಡಿಸಿರುವ ಸರ್ಕಾರ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ತುರ್ತು ಪ್ರಕರಣ ಎಂದು ಪರಿಗಣಿಸಬೇಕು ಎಂದಿದೆ.
ಅಲ್ಲಿನ ಅಲ್ಪಸಂಖ್ಯಾತರ ರಕ್ಷಣೆ ಮಾಡುವುದು ಇಮ್ರಾನ್ ಖಾನ್ ಸರ್ಕಾರದ ಜವಾಬ್ದಾರಿ. ಅದರಲ್ಲಿ ಹಿಂದು ಸಮುದಾಯವೂ ಒಂದು. ಅವರ ರಕ್ಷಣೆ ಹೊರಬೇಕು ಎಂದಿದೆ.
ಭಾರತಿ ಬಾಯಿ ಅವರನ್ನು ಶಸ್ತ್ರ ಸಜ್ಜಿತ ಯುವಕರ ತಂಡ ಅಪಹರಿಸಿತು. ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗಿದ್ದು, ಶಾರುಕ್ ಗುಲ್ ಎಂಬುವವನೊಂದಿಗೆ ಮದುವೆ ಮಾಡಲಾಗಿದೆ ಎಂದು ಆಲ್ ಪಾಕಿಸ್ತಾನ ಹಿಂದು ಕೌನ್ಸಿಲ್ ಆರೋಪಿಸಿದೆ. (ಏಜೆನ್ಸೀಸ್)