ನವದೆಹಲಿ: ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ನಡುವೆ ಉಂಟಾದ ಉದ್ವಿಘ್ನತೆಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ಗೌರವ ಸಲ್ಲಿಸಲಾಗುತ್ತಿದೆ.
ಹುತಾತ್ಮರಾದ 16ನೇ ಬಿಹಾರ್ ರೆಜಿಮೆಂಟ್ನ ಕಮ್ಯಾಂಡಿಂಗ್ ಅಧಿಕಾರಿ ಕರ್ನಲ್ ಸಂತೋಷ್ ಬಾಬು ಅವರಿಗೆ ತೆಲಂಗಾಣದ ಸೂರ್ಯಪೇಟೆಯಲ್ಲಿಂದು ಅಂತಿಮ ನಮನ ಸಲ್ಲಿಸಲಾಯಿತು. ಸಂತೋಷ್ ಬಾಬು ಅವರ ನಿವಾಸಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆದು, ಅವರ ತ್ಯಾಗವನ್ನು ನೆನೆದು ಕಣ್ಣೀರಾಕಿದರು.
ಪಾಟ್ನಾದ ಹವಾಲ್ದಾರ್ ಸುನೀಲ್ ಕುಮಾರ್ ನಿವಾಸದಲ್ಲೂ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅಂತಿಮ ದರ್ಶನ ಪಡೆದು ಹುತಾತ್ಮ ಯೋಧನ ತ್ಯಾಗ ಬಲಿದಾನಕ್ಕೆ ಸಲಾಂ ಹೊಡೆದರು. ಇದನ್ನೂ ಓದಿ: ಬಿಎಸ್ಎನ್ಎಲ್ 4ಜಿ ಅಪ್ಗ್ರೇಡ್ಗೆ ಚೀನಾ ಸಾಧನಗಳನ್ನು ಬಳಸದಿರಲು ಕೇಂದ್ರದ ನಿರ್ಧಾರ
ಚೀನಾ-ಭಾರತ ನಡುವಿನ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಇದಕ್ಕೆ ಪ್ರತಿಯಾಗಿ ಚೀನಾದಲ್ಲೂ 35 ಯೋಧರನ್ನು ಹೊಡೆದುರುಳಿಸಲಾಗಿದೆ. ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಚರ್ಚೆ ಸಾಗುತ್ತಿದೆ. (ಏಜೆನ್ಸೀಸ್)
#WATCH Guard of honour being given to Colonel Santosh Babu, Commanding Officer of the 16 Bihar regiment, who lost his life in action during the Galwan Valley clash#Telangana pic.twitter.com/sXWcualEX5
— ANI (@ANI) June 18, 2020