ನವದೆಹಲಿ: ಹೊಸದಾಗಿ ಮುದ್ರಣವಾಗುವ ನೋಟುಗಳಲ್ಲಿ ಲಕ್ಷ್ಮೀ ದೇವತೆ ಮತ್ತು ಭಗವಾನ್ ಗಣಪತಿಯ ಫೋಟೋಗಳನ್ನು ಸೇರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಹೊಸ ನೋಟುಗಳಲ್ಲಿ ಒಂದು ಕಡೆ ಮಹಾತ್ಮ ಗಾಂಧಿ ಫೋಟೋ ಸಹ ಇರಲಿ ಮತ್ತು ಇನ್ನೊಂದು ಕಡೆ ಗಣೇಶ ಹಾಗೂ ಲಕ್ಷ್ಮೀಯ ಫೋಟೋ ಸಹ ಇರಲಿ ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ.
ನೋಟುಗಳ ಮೇಲೆ ಈ ಎರಡು ಹಿಂದು ದೇವರುಗಳ ಫೋಟೋ ಹಾಕುವುದರಿಂದ ದೇಶದ ಏಳಿಗೆಗೆ ನೆರವಾಗಲಿದೆ ಮತ್ತು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.
ಸಾಕಷ್ಟು ಶ್ರಮ ಅಥವಾ ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ದೇವರ ಆಶೀರ್ವಾದ ಇಲ್ಲದಿದ್ದರೆ, ನಮ್ಮ ಶ್ರಮವೆಲ್ಲ ವ್ಯರ್ಥವಾಗುತ್ತವೆ. ಹೀಗಾಗಿ ಹೊಸದಾಗಿ ಮುದ್ರಣವಾಗುವ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮೀ ಫೋಟೋಗಳನ್ನು ಮುದ್ರಿಸುವಂತೆ ನಾನು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. (ಏಜೆನ್ಸೀಸ್)
ಬಂಡೇ ಮಠದ ಬಸವಲಿಂಗ ಶ್ರೀ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಮಹಿಳೆ ಜತೆಗಿನ ವಿಡಿಯೋ ಕಾಲ್!
ಎಐಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ: ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ
ಹಂಪಿಯಲ್ಲಿ ಕಳೆದುಕೊಂಡಿದ್ದ 2 ದುಬಾರಿ ಐಫೋನ್ಗಳನ್ನು ಯುವತಿಯರಿಬ್ಬರಿಗೆ ಮರಳಿಸಿದ ಪ್ರವಾಸಿ ಮಿತ್ರರು