More

    ಕೊಗನೋಳಿಯಲ್ಲಿ ನಾಲ್ಕು ಕುರಿ ಸಾವು

    ನಿಪ್ಪಾಣಿ: ಔಷಧ ನೀಡುವಾಗ ಏರುಪೇರಾದ ಪರಿಣಾಮ 4 ಕುರಿಗಳು ಮೃತಪಟ್ಟಿದ್ದು, 8 ಕುರಿಗಳ ಸ್ಥಿತಿ ಗಂಭೀರವಾದ ಘಟನೆ ತಾಲೂಕಿನ ಕೊಗನೋಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಛಾಯಾಚಿತ್ರಕಾರ ಬಾಳಾಸಾಹೇಬ ಕೋಳೆಕರ ಅವರಿಗೆ ಸೇರಿದ ಕುರಿಗಳಿಗೆ ಪಶು ಆಸ್ಪತ್ರೆಯ ಸಿಬ್ಬಂದಿ ಟಾನಿಕ್ ಬದಲಾಗಿ ಜಂತು ಹುಳುವಿನ ಔಷಧ ನೀಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಬಾಳಾಸಾಹೇಬ ಆರೋಪಿಸಿದ್ದಾರೆ. ಈ ದುರ್ಘಟನೆಯಿಂದ 2.50 ಲಕ್ಷ ರೂ. ಹಾನಿಯಾಗಿದೆ.

    ಪಶು ಆಸ್ಪತ್ರೆಯ ತಾಲೂಕಿನ ಸಹಾಯಕ ನಿರ್ದೇಶಕ ಡಾ. ಜೆ.ಎಂ. ಕಂಕಣವಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭದಲ್ಲಿ 3-5 ಮಿ.ಲೀ. ರಷ್ಟು ಜಂತು ಹುಳುವಿನ ಔಷಧ ಕೊಡಬೇಕಾಗುತ್ತದೆ. ಸಹಾಯಕ 10 ಮಿ.ಲೀ. ಹಾಕಲು ಹೇಳಿದ್ದ. ಆದರೆ, ಕೋಳೆಕರ ಅವರು 20 ಮಿ.ಲೀ. ಕುಡಿಸಿದ್ದಾರೆ. ಮೃತಪಟ್ಟ ಕುರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಕಂಕಣವಾಡಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts