ಜೈಪುರ: ಮಧ್ಯರಾತ್ರಿಯಲ್ಲಿ ಡ್ರೋನ್ ಮೂಲಕ ಕೀಟ ನಾಶಕ ಸಿಂಪಡಿಸಿ ಮಿಡತೆಗಳ ಬೃಹತ್ ಹಿಂಡನ್ನು ಅಧಿಕಾರಿಗಳು ನಾಶ ಮಾಡಿದ್ದಾರೆ.
ವಿರಾಟ್ನಗರದ ಗುಡ್ಡಗಾಡು ಪ್ರದೇಶದಲ್ಲಿ ಶನಿವಾರ ರಾತ್ರಿ ಡ್ರೋನ್ ಮೂಲಕ ಮಿಡತೆಗಳನ್ನು ನಾಶ ಮಾಡಲಾಯಿತು. ಗುಡ್ಡಗಾಡು ಪ್ರದೇಶವಾದ್ದರಿಂದ ಟ್ರ್ಯಾಕ್ಟರ್ ಮೂಲಕ ಕ್ರೀಮಿನಾಶ ಸಿಂಪಡಣೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಡ್ರೋಣ್ ಬಳಸಬೇಕಾಯಿತು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ ಕಾಲ್ನಡಿಗೆ, ಬಸ್, ರೈಲು ಹಿಡಿದು ಊರಿಗೆ ಬಂದಾಯ್ತು…., ಮುಂದೇನು?
ವಿರಾಟ್ನಗರದ ಮೂರು ಹಳ್ಳಿಗಳ 230 ಹೆಕ್ಟೇರ್ ಪ್ರದೇಶದಲ್ಲಿ ಮಿಡತೆಗಳು ಇರುವುದು ಪತ್ತೆಯಾಯಿತು. ಈ ಪ್ರದೇಶ ಗುಡ್ಡವಾಗಿರುವುದರಿಂದ ಅಲ್ಲಿ ಕ್ರಿಮಿನಾಶಕ ಸಿಂಪಡಣೆ ಕಷ್ಟವಾಯಿತು. ಹೀಗಾಗಿ ಡ್ರೋನ್ ಬಳಸಲಾಗಿದೆ ಎಂದು ಜೈಪುರದ ಕೃಷಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
230 ಹೆಕ್ಟೇರ್ ಪ್ರದೇಶದಲ್ಲಿ ಕೇವಲ 103 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕ್ರಿಮಿನಾಶಕ ಸಿಂಪಡಿಸಲಾಗಿದೆ.ಇದಕ್ಕಾಗಿ 50 ಲೀಟರ್ ಕ್ರಿಮಿನಾಶಕ ಬಳಸಲಾಗಿದೆ. ಇದರಿಂದ ಶೇ.50 ರಷ್ಟು ಮಿಡತೆಗಳು ನಾಶವಾಗಿವೆ. ಈ ಪ್ರದೇಶದಲ್ಲಿ ಈಗಾಗಲೇ 2 ಬಾರಿ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಮಿಡತೆಗಳನ್ನು ಸಂಪೂರ್ಣವಾಗಿ ನಾಶ ಮಾಡುವವವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ!
26 ವರ್ಷಗಳ ನಂತರ ಜೈಪುರದಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ, ರಾಜಸ್ತಾನದ 12 ಜಿಲ್ಲೆಗಳ 6.70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯನ್ನು ನಾಶ ಮಾಡಿವೆ. ಇದರಿಂದ ಅಂದಾಜು ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)