More

    ಆಟೋದಲ್ಲಿ ಬಂದು ಪುಸ್ತಕ ಕೊಳ್ಳುವಂತಾ ಯೋಜನೆ ಜಾರಿ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ

    ಮೈಸೂರು: ದಸರಾದಲ್ಲಿ ಪುಸ್ತಕ ಖರೀದಿಗೆ ಜನರು ಬರುವುದಿಲ್ಲ ಎನ್ನುವುದನ್ನು ಹೋಗಲಾಡಿಸಲು ಜನರೇ ಆಟೋಗಳಲ್ಲಿ ಬಂದು ಪುಸ್ತಕ ಖರೀದಿಸುವಂತಹ ಯೋಜನೆ ರೂಪಿಸಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
    ಮುಂಬರುವ ದಸರ ಸಂದರ್ಭದಲ್ಲಿ ಪುಸ್ತಕ ಪ್ರಾಧಿಕಾರ ಏರ್ಪಡಿಸುವ ಪುಸ್ತಕ ಪ್ರದರ್ಶನ ಕುರಿತು ಆಟೋಗಳಲ್ಲಿ ನಗರದಾದ್ಯಂತ ಪ್ರಚಾರ ಮಾಡುವಂತೆ ಪ್ರಕಾಶಕರು ಸಲಹೆ ನೀಡಿದ್ದಾರೆ. ಆದರೆ ಜನರೇ ಆಟೋಗಳಲ್ಲಿ ಬಂದು ಪುಸ್ತಕ ಖರೀದಿಸುವಂತೆ ಮಾಡುವುದು ನನ್ನ ಗುರಿ ಎಂದರು.
    ನೀವು ಪುಸ್ತಕಗಳನ್ನು ಓದದಿದ್ದರೂ ಪರವಾಗಿಲ್ಲ. ಆದರೆ ಪ್ರತಿಯೊಬ್ಬರೂ ಪುಸ್ತಕ ಖರೀದಿಸಿ, ನಿಮ್ಮ ಮನೆಗಳಲ್ಲಿ ಇಡಿ. ಇದರಿಂದ ಬೇರೆಯವರು ನಿಮ್ಮನ್ನು ನೋಡುವ ರೀತಿಯೇ ಬದಲಾಗುತ್ತದೆ ಎಂದು ಹೇಳಿದರು.
    ಕೆಲವರಿಗೆ ನಿದ್ದೆ ಬರುವುದಿಲ್ಲ ಎನ್ನುವವರು ಪುಸ್ತಕಗಳನ್ನು ತೆರೆದು ನೋಡಿ ಆಗ ನಿದ್ರೆ ಮಾತ್ರೆ ಇಲ್ಲದೆಯೇ ಚೆನ್ನಾಗಿ ನಿದ್ದೆಯೂ ಬರುತ್ತದೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಪುಸ್ತಕಗಳ ಭಂಡಾರ ಇರಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts