More

    ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಇರಿದು ಮಹಿಳೆಯ ಬರ್ಬರ ಹತ್ಯೆ‌

    ಬೆಂಗಳೂರು: ಮಂಗಳವಾರ ತಡರಾತ್ರಿ ನಗರದ ಚಂದ್ರಾಲೇಔಟ್​ ವ್ಯಾಪ್ತಿಯ ವಿನಾಯಕ ಲೇಔಟ್​ನಲ್ಲಿ ಮಹಿಳೆಯೊಬ್ಬರ ಹತ್ಯೆಯಾಗಿದ್ದು, ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗಿದೆ.

    ಶಾಂತಮ್ಮ (40) ಕೊಲೆಯಾದ ದುರ್ದೈವಿ. ಮಾರಕಾಸ್ತ್ರಗಳಿಂದ ಇರಿದು ಕೊಲೆ ಹತ್ಯೆ ಮಾಡಲಾಗಿದೆ.

    ಛತ್ರವೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಾಂತಮ್ಮ, ಧನು ಎಂಬಾತನನ್ನು ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು, ಆದರೆ, ಇತ್ತೀಚೆಗೆ ವಿನಾಯಕ ಲೇಔಟ್​ನಲ್ಲಿ ವಡಿವೇಲು ಎಂಬಾತನ ಜತೆ ಶಾಂತಮ್ಮ ವಾಸವಿದ್ದಳು ಎನ್ನಲಾಗಿದೆ.

    ಮಂಗಳವಾರ ರಾತ್ರಿ ವಿನಾಯಕ ಲೇಔಟ್ ಮನೆಯಲ್ಲಿ ಶಾಂತಮ್ಮ, ವಡಿವೇಲು ಹಾಗೂ ಧನು ಒಟ್ಟಿಗೆ ಭೇಟಿಯಾದಾಗ ಮೂವರ ನಡುವೆ ಗಲಾಟೆ ಶುರುವಾಗಿ, ಕೊಲೆಯಲ್ಲಿ‌ ಅಂತ್ಯವಾಗಿದೆ.

    ಸದ್ಯಕ್ಕೆ ಧನು, ವಡಿವೇಲು ಹಾಗೂ ವಡಿವೇಲು‌ ಸಂಬಂಧಿ‌ ನರಸಿಂಹ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಂದ್ರಾಲೇಔಟ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    VIDEO| ಕರೊನಾ ತವರು ಚೀನಾದಲ್ಲಿ ಮನಕಲಕುವ ಘಟನೆ: ಒಂದೇ ಸ್ಥಳದಲ್ಲಿ ಸುತ್ತುತ್ತಿರುವ ಬೆಂಗಾಲ್​ ಟೈಗರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts