More

    ಚುನಾವಣೆ ಬಂತು ಎಂದಾಗ ಬೆಂಗಳೂರಿಗೆ ಕಾಲಿಟ್ಟ ನಾಡ ಪಿಸ್ತೂಲ್​ಗಳು!

    ಬೆಂಗಳೂರು: ಇನ್ನೇನು ಚುನಾವಣೆ ಬಂತು ಎನ್ನುವಾಗಲೇ ಬೆಂಗಳೂರಿನಲ್ಲಿ ನಾಡ ಪಿಸ್ತೂಲುಗಳು ಕಾಣ ಸಿಕ್ಕಿವೆ.

    ರೋಶನ್ ಎಂಬಾತನಿಂದ ಅಕ್ರಮವಾಗಿ 10 ಪಿಸ್ತೂಲ್​ಗಳು ಬೆಂಗಳೂರಿಗೆ ಬಂದಿದ್ದು ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಂಬೈನ ಅಂಡರ್​ವರ್ಲ್ಡ್​ನಿಂದ ಬೆಂಗಳೂರು ಭೂಗತ ಜಗತ್ತಿಗೆ ಪಿಸ್ತೂಲ್​ಗಳು ಸರಬರಾಜು ಆಗಿರುವ ಶಂಕೆ ವ್ಯಕ್ತವಾಗಿದ್ದು ಬೆಂಗಳೂರು ಸಿಸಿಬಿ ಪೊಲೀಸರು0 10 ಪಿಸ್ತೂಲ್​ಗಳನ್ನು ವಶಕ್ಕೆ ಪಡೆದಿದ್ದಾರೆ.

    ಈ ಆರೋಪಿ ರೋಶನ್​, ಬಾಂಬೆಯಿಂದ ಬಸ್ ಮೂಲಕ ಬೆಂಗಳೂರಿಗೆ ಪಿಸ್ತೂಲ್ ತಂದಿದ್ದ. ಮೊದಲಿಗೆ 4 ಪಿಸ್ತೂಲುಗಳನ್ನು ಬೆಂಗಳೂರಿನ ಅಂಡರ್​ವರ್ಲ್ಡ್​ಗೆ ನೀಡಲು ತಂದಿದ್ದ ಎನ್ನಲಾಗಿದೆ. ಆ ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ನಂತರ 6 ಪಿಸ್ತೂಲುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಈಗಾಗಲೇ ನಾಗಪುರದಲ್ಲಿ ಆರೋಪಿ ಮೇಲೆ ಮೂರು ಪ್ರಕರಣಗಳಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಆರೋಪಿಯಿಂದ ಒಟ್ಟು 10 ನಾಡ ಪಿಸ್ತೂಲ್, 7.65 ಎಂಎಂನ 20 ಜೀವಂತ ಗುಂಡುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts