More

    ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

    ಇಳಕಲ್ಲ(ಗ್ರಾ): ದೇಶದ್ರೋಹಿ ಹೇಳಿಕೆಗಳನ್ನು ನೀಡುವವರನ್ನು ಪಾಕಿಸ್ತಾನಕ್ಕೆ ಬಿಟ್ಟು ಬರಲು ಹಿಂದು ಜಾಗರಣ ಸಮಿತಿ ಸಿದ್ಧವಾಗಿದೆ ಎಂದು ಸಮಿತಿ ಸಂಚಾಲಕ ಪರಶುರಾಮ ಬಿಸಲದಿನ್ನಿ ಹೇಳಿದರು.

    ಪಟ್ಟಣದಲ್ಲಿ ಹಿಂದು ಜಾಗರಣ ಸಮಿತಿಯಿಂದ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸೋಮವಾರ ನಡೆಸಿದ ಪ್ರತಿಭಟನಾ ಮೆರವಣಿಗೆ ವೇಳೆ ಕಂಠಿ ವೃತ್ತದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಕೆಲವರು ದೇಶದ್ರೋಹಿ ಹೇಳಿಕೆಗಳನ್ನು ಕೊಟ್ಟು ದೊಡ್ಡವರಾಗುವ ಕನಸು ಕಾಣುತ್ತಿದ್ದಾರೆ. ಅಂಥವರಿಗೆ ಕಠಿಣ ಶಿಕ್ಷೆ ಕೊಡಬೇಕು ಅಥವಾ ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

    ಸಮಿತಿ ಮುಖ್ಯಸ್ಥ ಪ್ರದೀಪ ಅಮರಣ್ಣನವರ ಮಾತನಾಡಿ, ಎಂಐಎಂ ಪಕ್ಷಕ್ಕೆ ಸಾರ್ವಜನಿಕ ಸಭೆ ನಡೆಸಲು ಅವಕಾಶ ನೀಡಿದ ವೇಳೆ ದೇಶದ್ರೋಹದ ಮಾತುಗಳನ್ನು ಕೇಳುವಂತೆ ಮಾಡಲಾಗಿದೆ ಎಂದು ಆರೋಪಿಸಿದ ಅವರು ಅಂಥವರಿಗೆ ಸಾರ್ವಜನಿಕ ಸಭೆ ನಡೆಸುವ ಅವಕಾಶವನ್ನೇ ಕೊಡಬಾರದು ಎಂದು ಹೇಳಿದರು.

    ಆರ್‌ಎಸ್‌ಎಸ್ ಪ್ರಮುಖ ನಾರಾಯಣ ಚಿಲ್ಲಾಳ ಮತ್ತಿತರರು ಮಾತನಾಡಿದರು. ಕಂದಾಯ ಇಲಾಖೆ ಅಧಿಕಾರಿ ಈಶ್ವರ ಗಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಸದಸ್ಯ ಮಂಜುನಾಥ ಶೆಟ್ಟರ, ಬಿಜೆಪಿ ಮುಖಂಡ ಎಂ.ಆರ್. ಪಾಟೀಲ ಮತ್ತಿತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts