ಲಖನೌ: ಪ್ರಾಣಿಗಳು ಆಗ್ಗಾಗ್ಗೆ ಮನುಷ್ಯರಿಗೆ ಎದುರಾಗುವುದು ಸಾಮಾನ್ಯ. ಆದರೆ ಒಬ್ಬರೇ ಇದ್ದಾಗ ಪ್ರಾಣಿ ಎದುರಾದರೆ ಏನಾಗಬಹುದು.ಹೀಗೊಂದು ಘಟನೆ ಇಲ್ಲಿ ನಡೆದಿದ್ದು, ರಾತ್ರಿ ವೇಳೆಯಲ್ಲಿ ಅರಣ್ಯಾಧಿಕಾರಿಗಳ ವಿಶ್ರಾಂತಿ ಗೃಹಕ್ಕೆ ಆಗಮಿಸಿದ ಚಿರತೆ ರಾಜಾರೋಷವಾಗಿ ಓಡಾಡಿರುವ ಚಿತ್ರವನ್ನು ಅಧಿಕಾರಿಯೊಬ್ಬರು ಸೆರೆ ಹಿಡಿದಿದ್ದಾರೆ.
ವಿಶ್ರಾಂತಿ ಗೃಹದಲ್ಲಿದ್ದ ಐಎಫ್ಎಸ್ ಅಧಿಕಾರಿ ನಿವಾಸಕ್ಕೆ ಮಧ್ಯರಾತ್ರಿ ಅತಿಥಿಯೊಂದು ಆಗಮಿಸಿದೆ. ನಾವಿಬ್ಬರು ಉತ್ತಮ ಸಮಯ ಕಳೆದೆವು ಎಂದು ಚಿರತೆಯ ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಖತರ್ನಿಯಾಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ವಿಶ್ರಾಂತಿ ಗೃಹದಲ್ಲಿ ಐಎಫ್ಎಸ್ ಅಧಿಕಾರಿ ಆಕಾಶ್ ದೀಪ್ ಬಧ್ವಾನ್ ಇದ್ದರು. ಈ ವೇಳೆ ಚಿರತೆ ಆಗಮಿಸಿದೆ. ಈ ವೇಳೆ ಅದರ ದೃಶ್ಯವನ್ನು ಸೆರೆಹಿಡಿದಿದ್ದಾರೆ. ನಿನ್ನೆ ರಾತ್ರಿ ಚಿರತೆಯ ಬಂದಿತ್ತು, ಅದರ ನಡೆಯ ನೋಟ ನಿಮಗೆ ವಿನೋದವೆನಿಸಬಹುದು ಎಂದೂ ಟ್ವೀಟ್ ಮಾಡಿದ್ದಾರೆ.
ಅಲ್ಲದೇ 120 ವರ್ಷಗಳ ಇತಿಹಾಸ ಹೊಂದಿರುವ ಈ ವನ್ಯಜೀವಿ ಅಭಯಾರಣ್ಯ ತುಂಬಾ ಪ್ರಸಿದ್ಧಿಯಾಗಿದೆ ಎಂದೂ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟ್ಗೆ 3 ಸಾವಿರಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಅಧಿಕಾರಿ ಆಕಾಶ್ ದೀಪ್ ಬಧ್ವಾನ್ ಅವರು ಆಗ್ಗಾಗ್ಗೆ ವನ್ಯಜೀವಿಗಳ ವಿಶೇಷ ಫೋಟೋ ಸೆರೆ ಹಿಡಿದು ಟ್ವೀಟ್ ಮಾಡುತ್ತಿರುತ್ತಾರೆ. (ಏಜೆನ್ಸೀಸ್)