More

    ಪಂಜಾಬ್​ ಸರ್ಕಾರಕ್ಕೆ ನನ್ನನ್ನು ಬಂಧಿಸುವ ಉದ್ದೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರುತ್ತಿದ್ದರು: ಅಮೃತ್​ಪಾಲ್​ ಸಿಂಗ್​

    ಪಂಜಾಬ್​: ಸಿಖ್​ ಮೂಲಭೂತವಾದಿ ಧರ್ಮ ಪ್ರಚಾರಕ, ವಾರಿಸ್​ ಪಂಜಾಬ್​ ದೇ ಸಂಘಟನೆಯ ಮುಖ್ಯಸ್ಥ ಅಮೃತ್​ಪಾಲ್​ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ​ ಹೊಸ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಪೊಲೀಸರು ಹಾಗೂ ಸರ್ಕಾರದ ವಿರುದ್ದ ಸರಣಿ ಆರೋಪಗಳನ್ನು ಮಾಡಲಾಗಿದೆ.

    ವಿಡಿಯೋದಲ್ಲಿ ಕಂಡು ಬರುವ ಹಾಗೆ ಕಪ್ಪು ಪೇಟ-ಶಾಲನ್ನು ಧರಿಸಿರುವ ಅಮೃತ್​ಪಾಲ್​ ಪಂಜಾಬ್​ ಸರ್ಕಾರಕ್ಕೆ ತನ್ನನ್ನು ಬಂಧಿಸುವ ಉದ್ಧೇಶ ಇದ್ದಿದ್ದರೆ ಪೊಲೀಸರು ನನ್ನ ಮನೆಗೆ ಬರಬಹುದಿತ್ತು. ನಾನು ಶರಣಾಗಲು ಸಿದ್ದನಾಗಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

    ಇದನ್ನೂ ಓದಿ: ಮಮತಾ ಬ್ಯಾನರ್ಜಿ ಬಗ್ಗೆ ಅಪಹಾಸ್ಯ; ಪ್ರಧಾನಿ ಸ್ಥಾನದಿಂದ ನರೇಂದ್ರ ಮೋದಿ ಅನರ್ಹಗೊಳಿಸಿ TMC ಆಗ್ರಹ

    ತನ್ನನ್ನು ಬಂಧಿಸಲು ಇಲ್ಲಿಯವರೆಗೂ ಸಾವಿರಾರು ಪೊಲೀಸರು ಬಂದಿದ್ಧಾರೆ. ಆದರೆ, ಅವರೆಲ್ಲರಿಂದಲ್ಲೂ ಆ ಭಗವಂತ ನನ್ನನ್ನು ಕಾಪಾಡಿದ ಮತ್ತು ತಮ್ಮ ಸಿಖ್​ ಸಮುದಾಯದವರನ್ನು ಬಂಧಿಸಿ ಹಿಂಸೆ ನೀಡಿರುವ ಪಂಜಾಬ್​ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನ ಖಂಡಿಸಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಹಿನ್ನಲೆ ಖಲಿಸ್ತಾನಿ ಪ್ರತ್ಯೇಕವಾದಿ ಅಮೃತ್​ಪಾಲ್​ ಸಿಂಗ್​ ಪೊಲೀಸರಿಗೆ ಶರಣಾಗಬಹುದು ಎಂದು ಹೇಳಲಾಗಿದೆ.

    ಅಮೃತ್​ಪಾಲ್​ ವಿಡಿಯೋ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಅಮೃತಸರ್​​ ಪೊಲೀಸ್​ ಕಮಿಷನರ್​ ನೌನಿಹಾಲ್​ ಸಿಂಗ್​ ಅಮೃತ್​ಪಾಲ್​ ಸಿಂಗ್​ ಗೋಲ್ಡನ್​ ಟೆಂಪಲ್​ನಲ್ಲಿ ಶರಣಾಗುವ ಸಾದ್ಯತೆ ಇದೆ. ಕಾನೂನು-ಸುವ್ಯವಸ್ಥೆ ಹದಗೆಡದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗುವುದು ಎಂದು ತಿಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts