More

    ಬೇಲಿ ಮೇಲೆ ಕುಳಿತಿರುವವರು ಸ್ವಲ್ಪ ಆಚೀಚೆ ನೆಗೆದರೆ ಸಚಿನ್​ ಪೈಲಟ್​ ಸಿಎಂ

    ಜೈಪುರ: ಅನೇಕ ಶಾಸಕರು ಬೇಲಿ ಮೇಲೆ ಕುಳಿತಿದ್ದಾರೆ. ಅವರಲ್ಲಿ ಒಂದಿಷ್ಟು ಶಾಸಕರು ಆಚೀಚೆ ಹಾರಿದರೂ ಸಚಿನ್​ ಪೈಲಟ್​ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುತ್ತಾರೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾ ಹೇಳಿದ್ದಾರೆ.

    ಸುದ್ದಿಗಾರರ ಜತೆ ಮಾತನಾಡಿರುವ ಅವರು, ಸಚಿನ್​ ಪೈಲಟ್​ ಜತೆ 18 ಶಾಸಕರು ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಎತ್ತಿದ್ದಾರೆ. ಇನ್ನು ಕೆಲವು ಶಾಸಕರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಪೈಲಟ್​ ಪಾಳೆಯ ಕೈ ಮೇಲಾಗುತ್ತದೆ ಎನ್ನುವುದಾದರೆ ಅವರೆಲ್ಲರೂ ಇತ್ತ ಜಿಗಿಯಲಿದ್ದಾರೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಮನೆಪಾಠ ಮಾಡಲೆಂದು ಬಂದ, ಬಾಲಕನ ಮೇಲೆ ಅತ್ಯಾಚಾರ ಎಸಗಿದ; ಬಹಿರಂಗಪಡಿಸಿದರೆ ಆತ್ಮಹತ್ಯೆಯ ಬೆದರಿಕೆ ಒಡ್ಡಿದ!

    ಜ್ಯೋತಿರಾದಿತ್ಯ ಸಿಂಧ್ಯಾ ಅವರು ಬಂಡಾಯ ಎದ್ದಿದ್ದರಿಂದ ಮಧ್ಯಪ್ರದೇಶದ ಕಮಲ್​ನಾಥ್​ ಸರ್ಕಾರ ಉರುಳಿತ್ತು. ಅದರಂತೆ ರಾಜಸ್ಥಾನದಲ್ಲಿ ಸಚಿನ್​ ಪೈಲಟ್​ ಅವರು ಗೆಹ್ಲೋಟ್​ ಸರ್ಕಾರದ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಹಾಗಾಗಿ, ಇಲ್ಲಿಯೂ ಕೂಡ ಕಾಂಗ್ರೆಸ್​ ಸರ್ಕಾರವನ್ನು ಉರುಳಿಸಿ, ತನ್ನ ಸರ್ಕಾರವನ್ನು ಪ್ರತಿಷ್ಠಾಸಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್​ ಮುಖಂಡರು ಆರೋಪಿಸುತ್ತಿದ್ದಾರೆ.

    ಆದರೆ, ಸರ್ಕಾರವನ್ನು ಉರುಳಿಸಲು ತಾವು ಯಾವುದೇ ಹುನ್ನಾರ ನಡೆಸಿಲ್ಲ. ಒಂದು ವೇಳೆ ಸಚಿನ್​ ಪೈಲಟ್​ ಸಿಎಂ ಸ್ಥಾನದಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾದರೆ, ಆಗ ಸರ್ಕಾರ ರಚನೆಯ ಸಾಧ್ಯತೆ ಕುರಿತು ಬಿಜೆಪಿ ಒಂದು ಕೈ ನೋಡುತ್ತದೆ ಎಂದು ಪೂನಿಯಾ ಹೇಳಿದ್ದಾರೆ.

    ಭಾರತ-ಚೀನಾ ವಾಣಿಜ್ಯ ವಾರ್​ ಬಿಗಿ: ಅಮೆರಿಕ-ಚೀನಾ ಫೈನಾನ್ಶಿಯಲ್ ವಾರ್ ಶೀಘ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts