ಬೆಂಗಳೂರು: ಇಂಧನ ಇಲಾಖೆಯ ಭ್ರಷ್ಟಾಚಾರದ ಅಂಕಿ-ಅಂಶಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಲಿ ಬಳಿಕ ಮಾತನಾಡುತ್ತೇನೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಏನು ಬೇಕಾದರೂ ಬಿಡುಗಡೆ ಮಾಡಲಿ. ಮೊದಲು ಅವರು ಬಿಡುಗಡೆ ಮಾಡಲಿ ಆಮೇಲೆ ಮಾತನಾಡುತ್ತೇನೆ. ಏನು ಅಂಕಿ-ಅಂಶಗಳನ್ನ ಬಿಡುಗಡೆ ಮಾಡುತ್ತಾರೋ ನೋಡೋಣ ಎಂದರು.
ಇಲಾಖೆಯಲ್ಲಿ ಯಾರಾದರೂ ಹಣ ಲೂಟಿ ಮಾಡಿದ್ದರೆ ಅವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳೋಣ ಎಂದು ಹೇಳಿದರು.
ಪೆನ್ ಡ್ರೈವ್ ತೋರಿಸಿದ್ದರಲ್ಲ, ಅದನ್ನು ಏನಾದರೂ ಅವರು ಬಿಡುಗಡೆ ಮಾಡಿದರಾ? ಎಂದು ಜಾರ್ಜ್ ಪ್ರಶ್ನಿಸಿದರು.