ಹೂವಿನಹಿಪ್ಪರಗಿ: ಗ್ರಾಮದ ನಿವಾಸಿ ಶಾರಾದಾ ಈರಣ್ಣ ವಡವಡಗಿ ಅವರ ತೋಟದಲ್ಲಿ ಬೆಳೆದ ಅಂದಾಜು ಎರಡು ನೂರಕ್ಕೂ ಹೆಚ್ಚು ಈರುಳ್ಳಿ ಬಳ್ತಕ್ಕೆ (ಸಂಗ್ರಹಗಾರ) ಮಂಗಳವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವಾಗಿದೆ. ಈ ಕುರಿತು ಗ್ರಾಮ ಲೆಕ್ಕಾಧಿಕಾರಿ ಸಲೀಂ ಯಲಗೋಡ ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ಮಾಡಿ ಸರ್ಕಾರಕ್ಕೆ ವರದಿ ಸಲಿಸಿದ್ದಾರೆ. ಈರುಳ್ಳಿ ಹಾನಿ ಪರಿಹಾರ ನೀಡಬೇಕೆಂದು ರೈತ ಮಹಿಳೆ ಶಾರದಾ ಮನವಿ ಮಾಡಿದ್ದಾರೆ.