More

    ಹಿರೇಹಡಗಲಿಯ ಕಟ್ಟೆ ಬಸವೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ

    ಹೂವಿನಹಡಗಲಿ: ತಾಲೂಕಿನ ಹಿರೇಹಡಗಲಿಯ ಕಟ್ಟೆಬಸವೇಶ್ವರ (ಕಲ್ಲೇಶ್ವರ) ದೇವಸ್ಥಾದನ ಶಿವಲಿಂಗಕ್ಕೆ ಮಂಗಳವಾರ ಸೂರ್ಯರಶ್ಮಿ ಸ್ಪರ್ಶವಾಗಿದೆ.

    ಗ್ರಾಮದ ಕೆರೆಯ ಪಟ್ಟದಲ್ಲಿರುವ ಶ್ರೀಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿ ಅಮಾವಾಸ್ಯೆ ದಿನದಂದು ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸುವ ಪವಾಡ ನಡೆಯುತ್ತದೆ. ಈ ವರ್ಷವೂ ಪೂಜಾರಿ ಪ್ರಕಾಶ್, ಎಂದಿನಂತೆ ದೇಗುಲಕ್ಕೆ ತೆರಳಿ ಶ್ರೀಸ್ವಾಮಿಗೆ ಪೂಜೆ ಸಲ್ಲಿಸಲು ಮುಂದಾದಾಗ ಬೆಳಗ್ಗೆ 7ಗಂಟೆಯಿಂದ 5 ನಿಮಿಷಗಳ ಕಾಲ ಸೂರ್ಯ ರಶ್ಮಿ ನೇರ ಲಿಂಗದ ಮೇಲೆ ನೇರವಾಗಿ ಬೆಳಕು ಚೆಲ್ಲಿದೆ.

    ಈ ಸುದ್ದಿ ತಿಳಿದ ಗ್ರಾಮಸ್ಥರು ಶ್ರೀಸ್ವಾಮಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸಲ್ಲಿಸಲು ಸಿದ್ಧತೆ ನಡೆಸಿದ್ದರು. ಸೂರ್ಯರಶ್ಮಿಯ ಸ್ಪರ್ಶವಾದ ಬಳಿಕ ನೆರೆದಿದ್ದ ಭಕ್ತರು ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಪುರಾತನ ದೇವಸ್ಥಾನವನ್ನು ಕಲ್ಯಾಣಿ ಚಾಲುಕ್ಯರು ಕಟ್ಟಿಸಿದರು ಎಂಬ ಪ್ರತೀತಿ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts