ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆ.11ರಂದು ನಡೆಯಲಿದೆ. ಫೆ.1ರಂದು ರಥಸಪ್ತಮಿ, ಮಾರ್ತಾಂಡ ಭೈರವನ ಡೆಂಕನ ಮರಡಿ ಆರೋಹಣ, ಕಡುಬಿನ ಕಾಳಗ ಜರುಗಲಿದೆ. ಭರತ ಹುಣ್ಣಿಮೆಯ ದಿನವಾದ ಫೆ.9ರಂದು ಧ್ವಜಾರೋಹಣ, 10ರಂದು ತ್ರಿಶೂಲ ಪೂಜೆ, 11ರಂದು ಬೆಳಗ್ಗೆ 9 ಗಂಟೆಗೆ ಮಲ್ಲಾಸುರನ ಸಂಹಾರ, ಡೆಂಕನ ಮರಡಿಗೆ ಗುಪ್ತಮೌನ ಸವಾರಿ, ಸಂಜೆ 5.30 ಕ್ಕೆ ಮೈಲಾರ ಲಿಂಗೇಶ್ವರ ದೇವಸ್ಥಾನದ ಶ್ರೀ ಗುರುಪರಂಪರೆ ಶ್ರೀ ಗುರುಗಳಿಂದ ಭಂಡಾರ ಆಶೀರ್ವಾದ ನಂತರ ಗೊರವಯ್ಯ ಕಾರ್ಣಿಕ ನುಡಿಯುತ್ತಾನೆ ಎಂದು ದೇವಸ್ಥಾನದ ಇಒ ಯು.ಎಚ್.ಪ್ರಕಾಶ್ ರಾವ್ ತಿಳಿಸಿದ್ದಾರೆ.