More

    ಪತ್ನಿಗೆ ಸಿಗರೇಟಿನಿಂದ ಸುಟ್ಟ ವಿಕೃತ ಪತಿ ಬಂಧನ

    ಕುಂದಾಪುರ: ಹೆಚ್ಚಿನ ವರದಕ್ಷಿಣೆ ಹಾಗೂ ಚಿನ್ನಕ್ಕೆ ಬೇಡಿಕೆಯಿಟ್ಟು ಪ್ರೀತಿಸಿ ಮದುವೆಯಾದ ಗರ್ಭಿಣಿ ಪತ್ನಿಗೆ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತಿ ಪ್ರದೀಪ ಎಂಬುವನನ್ನು ಕುಂದಾಪುರ ಪೊಲೀಸರು ಸೋಮವಾರ ರಾತ್ರಿ ಸಿದ್ದಾಪುರ ಸಮೀಪ ಬಂಧಿಸಿದ್ದಾರೆ.
    ಬೀಜಾಡಿ ನಿವಾಸಿ ಪ್ರಿಯಾಂಕ (21) ಪತಿಯ ಕಿರುಕುಳಕ್ಕೊಳಗಾದ ಮಹಿಳೆ. ಸೋಷಿಯಲ್ ಮೀಡಿಯಾಗಳಲ್ಲಿ ಪತ್ನಿಗೆ ಹಿಂಸೆ ನೀಡುತ್ತಿರುವ ವಿಡಿಯೋ ವೀಕ್ಷಿಸಿದ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಂಕದಕಟ್ಟೆ ಎಂಬುವರು ಸಿದ್ದಾಪುರ ಕಾಲನಿಯಲ್ಲಿ ಆರೋಪಿ ಇರುವುದು ಪತ್ತೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕುಂದಾಪುರ ಪಿಎಸ್‌ಐ ಸದಾಶಿವ ಆರ್.ಗವರೋಜಿ, ಸಹಾಯಕ ಅಧಿಕಾರಿ ಸುಧಾಕರ್ ಪ್ರದೀಪನ ಪತ್ತೆಗೆ ಬಲೆ ಬೀಸಿದರೂ ಆತ ತಪ್ಪಿಸಿಕೊಳ್ಳುತ್ತಿದ್ದ. ಸಿದ್ದಾಪುರ ಬಾರ್ ಒಂದರ ಸಿಸಿಟಿವಿಯಲ್ಲಿ ಪ್ರದೀಪನ ಚಲನೆ ವಲನ ತಿಳಿದು ಕೊನೆಗೆ ಸಿದ್ದಾಪುರ ಕಾಲನಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
    ಪ್ರದೀಪ್ ಹಾಗೂ ಪ್ರಿಯಾಂಕ ಪರಸ್ಪರ ಪ್ರೀತಿಸಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ಮದುವೆಯ ಬಳಿಕ ಪ್ರಿಯಾಂಕ ತನ್ನ ಪತಿ ಮನೆಯಲ್ಲೇ ನೆಲೆಸಿದ್ದರು. ಮದುವೆಯಾಗಿ ನಾಲ್ಕೈದು ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣ ತರುವಂತೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts