ಅಹಮದಾಬಾದ್: ತೀರ ಕ್ಷುಲ್ಲಕ ಕಾರಣಕ್ಕೆ ಪತಿ ತನಗೆ ಥಳಿಸಿ, ಗುಪ್ತಾಂಗಗಳಿಗೆ ಮೆಣಸಿನ ಪುಡಿ ತುಂಬಿ ಹಿಂಸೆ ನೀಡಿದ್ದಾನೆಂದು ಆರೋಪಿಸಿದ 23 ವರ್ಷದ ಮಹಿಳೆಯೋರ್ವಳು ದೂರು ದಾಖಲಿಸಿದ್ದಾಳೆ.
ಪತಿಯ ತಾಯಿಗೆ ಆಕೆ ಚಹಾ ಮಾಡಿಕೊಡಲು ನಿರಾಕರಿಸಿದ್ದೇ ಈ ಹಲ್ಲೆ ನಡೆಯಲು ಕಾರಣವಾಗಿದೆ.
ಇದನ್ನೂ ಓದಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದೊಂದಿಗೆ ಕೆಲಸ ಮಾಡುವ ಅವಕಾಶ
ಸೋಮವಾರ ಶೀತಲ ಸಾತಂ ಹಿಂದೂಗಳು ಆಚರಿಸುವ ಹಬ್ಬ. ಸಂಪ್ರದಾಯದ ಪ್ರಕಾರ ಆ ದಿನ ಭಕ್ತರು ಮನೆಯಲ್ಲಿ ಅಡುಗೆ ಮನೆಯಲ್ಲಿ ಒಲೆ ಅಥವಾ ಬೆಂಕಿ ಹೊತ್ತಿಸುವುದಿಲ್ಲ. ಆದ್ದರಿಂದ ಅದರ ಹಿಂದಿನ ದಿನ ಷಷ್ಠಿಯಂದೇ ಆಹಾರ ತಯಾರಿಸುತ್ತಾರೆ.
ಅಂದು ಅತ್ತೆ ಚಹಾ ಮಾಡಲು ಸೊಸೆಗೆ ಹೇಳಿದ್ದಾಳೆ. ಹಬ್ಬದ ಆ ದಿನದಂದು ಒಲೆ ಹೊತ್ತಿಸುವುದಿಲ್ಲ ಎಂದು ಹೇಳಿ ಸೊಸೆ ಚಹಾ ಮಾಡಲು ನಿರಾಕರಿಸುತ್ತಾಳೆ. ಅತ್ತೆ- ಸೊಸೆಯರ ಮಧ್ಯೆ ವಾಗ್ವಾದ ತಾರಕಕ್ಕೇರಿ ಆಕೆಯ ಗಂಡ ಆಕೆಗೆ ಥಳಿಸಿದ.
ಇದನ್ನೂ ಓದಿ: ನಕ್ಸಲ್ ಆಗಲು ಅನುಮತಿ ಕೊಡಿ- ರಾಷ್ಟ್ರಪತಿಗೆ ಯುವಕನ ಪತ್ರ: ಆಂಧ್ರದಲ್ಲಿ ತಲ್ಲಣ!
ನಂತರ, ಸೊಸೆ ಚಹಾ ತರಲು ಮನೆಯ ಸಮೀಪದ ಚಹಾದ ಅಂಗಡಿಯತ್ತ ಹೊರಟಳು. ಪತಿ ಮತ್ತು ಅತ್ತೆ ಆಕೆಯನ್ನು ಹಿಂಬಾಲಿಸಿ ಕಲ್ಲಿನಿಂದ ಹೊಡೆದು ಮನೆಯತ್ತ ಎಳೆದು ತಂದರು. ಆತ ಕ್ರೂರವಾಗಿ ಥಳಿಸಿ ಆಕೆಯ ಗುಪ್ತಾಂಗಗಳಿಗೆ ಮೆಣಸಿನ ಪುಡಿ ಹಾಕಿ ಕ್ರೂರವಾಗಿ ಥಳಿಸಿದ ಎಂದು ಆಕೆ ಆರೋಪಿಸಿದ್ದಾಳೆ.
ತನಗೆ ಮಗ ಹುಟ್ಟಿದಾಗಿನಿಂದ ಪತಿ ಮತ್ತು ಅತ್ತೆ ಕಿರುಕುಳ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಈ ಹಿಂದೆ ಹಲವಾರು ಬಾರಿ ಅವಳು ತನ್ನ ಹೆತ್ತವರೊಂದಿಗೆ ವಾಸಿಸಲು ತನ್ನ ತವರು ಮನೆಗೆ ಹೋಗಿ ಹಿಂತಿರುಗಿ ಬಂದಿರುವುದಾಗಿ ತಿಳಿಸಿದ್ದಾಳೆ.