ವಿಟ್ಲ: ತಾನು ಮನೆಬಿಟ್ಟು ಹೋಗಲು ಪತ್ನಿಯ ಕಿರುಕುಳವೇ ಕಾರಣ ಎಂದು ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದ ಕಾಶಿಮಠ ನಿವಾಸಿ ವಿಲ್ಫ್ರೆಡ್ ವೇಗಸ್ (48) ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ!
2020ರ ನವೆಂಬರ್ 27ರಂದು ಇವರು ನಾಪತ್ತೆಯಾದ ಬಗ್ಗೆ ಪತ್ನಿ ಪ್ಲೋರಿನ್ ವೇಗಸ್ ವಿಟ್ಲ ಠಾಣೆಗೆ ದೂರು ನೀಡಿದ್ದರು. ಇದೀಗ ವಿಲ್ಫ್ರೆಡ್ ಅವರನ್ನು ಹುಬ್ಬಳ್ಳಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪತ್ನಿ ದುಂದುವೆಚ್ಚ ಹಾಗೂ ಕೆಲಸದಲ್ಲಿ ತಪ್ಪು ಗುರುತಿಸಿ ನಿರಂತರ ಕಿರುಕುಳ ನೀಡುತ್ತಿದ್ದಳು. ಬೇರೆ ಕಡೆ ಕೆಲಸ ಮಾಡಬಾರದೆಂದು ತನ್ನ ಶೈಕ್ಷಣಿಕ ದಾಖಲೆ ಪತ್ರ, ಪಾಸ್ಪೋರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸನ್ಸ್ ಮೊದಲಾದವುಗಳನ್ನು ಬೆಂಕಿಗೆ ಹಾಕಿ ನಾಶ ಮಾಡಿದ್ದಳು. ಹೀಗಾಗಿ ಮನೆ ಬಿಟ್ಟೆ ಎಂದು ವಿಲ್ಫ್ರೆಡ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಹುಡುಕಾಟ ನಡೆಸುತ್ತಿದ್ದರೂ, ಹೈಕೋರ್ಟ್ಗೆ ಮೋರೆ ಹೋದ ಪತ್ನಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪತಿಯನ್ನು ಹುಡುಕುವಂತೆ ಮೊರೆಯಿಟ್ಟಿದ್ದರು. ಠಾಣೆಯಲ್ಲಿ ಪತ್ನಿ ಜತೆ ಮಾತನಾಡಲು ನಿರಾಕರಿಸಿದ ವಿಲ್ಫ್ರೆಡ್, ಮನೆಗೆ ತೆರಳದೆ ಹಿಂದೆ ಕೆಲಸ ಮಾಡಿಕೊಂಡಿದ್ದ ಹುಬ್ಬಳ್ಳಿಯಲ್ಲೇ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ದೂರು ವಾಪಸ್ ಪಡೆದಿದ್ದು ಏಕೆ? ಆ ಪತ್ರದಲ್ಲಿ ಏನಿದೆ?
ಮಗಳ ಹೆಸರೇ ಮನೆಯ ಹೆಸರು! ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಹೊಸ ವರಸೆ!