More

    ಮಕ್ಕಳಿಗೆ ಮೊಬೈಲ್ ಕೊಡುವ ವಿಚಾರದಲ್ಲಿ ದಂಪತಿ ಜಗಳ, ಪತ್ನಿ ಆತ್ಮಹತ್ಯೆ

    ಕುಂದಾಪುರ: ಮಕ್ಕಳಿಗೆ ಮೊಬೈಲ್ ಕೊಡುವ ವಿಚಾರದಲ್ಲಿ ಗಂಡ- ಹೆಂಡತಿ ಮಧ್ಯೆ ಜಗಳ ನಡೆದು ಕೊನೆಗೆ ಪತ್ನಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬೈಂದೂರಿನ ಕಾಲ್ತೋಡಿನಲ್ಲಿ ನಡೆದಿದೆ.
    ಕಾಲ್ತೋಡು ನೀರ್‌ಕುಳಿ ಮನೆಯ ಸುರೇಂದ್ರ ಶೆಟ್ಟಿ ಎಂಬುವರ ಮಗಳು ಸುಶ್ಮಿತಾ (35) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯ ಪತಿ ವಿಜಯ ಶೆಟ್ಟಿ ಮುಂಬೈಯಲ್ಲಿ ಹೋಟೆಲ್ ಉದ್ಯೋಗಿಯಾಗಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ವಿಜಯ್ ಶೆಟ್ಟಿಯು ಮಕ್ಕಳಿಗೆ ಯಾವಾಗಲೂ ಮೊಬೈಲ್ ಪೋನ್ ಕೊಡುತ್ತಿದ್ದು ಅದೇ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗುತ್ತಿತ್ತು.
    ಬುಧವಾರ ಬೆಳಗ್ಗೆಯೂ ವಿಜಯ್ ಮಕ್ಕಳಿಗೆ ಮೊಬೈಲ್ ಕೊಟ್ಟ ವಿಚಾರವಾಗಿ ಸುಶ್ಮಿತಾ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದು, ಇಬ್ಬರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಬೇಸತ್ತ ವಿಜಯ್ ತಾನು ಮುಂಬೈಗೆ ಹೋಗುವುದಾಗಿ ಹೇಳಿ ಬ್ಯಾಗಿಗೆ ಬಟ್ಟೆಗಳನ್ನು ಹಾಕತೊಡಗಿದ್ದರು. ಇದನ್ನು ನೋಡಿದ ಸುಶ್ಮಿತಾ ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. ಮನೆಯವರು ಬಾಗಿಲು ಬಡಿದರೂ ತೆಗೆದಿರಲಿಲ್ಲ. ನಂತರ ಕಿಟಕಿಯ ಗಾಜು ಒಡೆದು ನೋಡಿದಾಗ ಸುಶ್ಮಿತಾ ಫ್ಯಾನಿಗೆ ನೈಲಾನ್ ಹಗ್ಗ ಸಿಕ್ಕಿಸಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದರು. ತಕ್ಷಣ ಕೆಳಗಿಳಿಸಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಬೈಂದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts