ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ದಿನೇದಿನೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಿಬಿಐಗೆ ಪ್ರಕರಣ ಕೈವಶವಾದ ಬಳಿಕವಂತೂ ಹೊಸ ವಿಚಾರಗಳು ಹೊರ ಬರುತ್ತಿವೆ. ಇದೀಗ ಮರಣೋತ್ತರ ಪರೀಕ್ಷೆ ನಡೆಸಿದ ಆಸ್ಪತ್ರೆಯ ನಡೆ ಖಂಡಿಸಿ ನೋಟಿಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ಉಡುಗೊರೆ ರೂಪದಲ್ಲಿ ದರ್ಶನ್ಗೆ ಎರಡು ಕುದುರೆ ಕೊಟ್ಟ ಮಾಜಿ ಸಚಿವ
ಸುಶಾಂತ್ ಶವವನ್ನು ಮರಣೋತ್ತರ ಪರೀಕ್ಷೆಗೆಂದು ಕೂಪರ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅಚ್ಚರಿ ಏನೆಂದರೆ, ಆಗ ರಿಯಾ ಚಕ್ರವರ್ತಿಗೂ ಆಸ್ಪತ್ರೆಯಲ್ಲಿ ಪ್ರವೇಶ ನೀಡಲಾಗಿತ್ತು. ಆಸ್ಪತ್ರೆಯ ಈ ನಡೆಯನ್ನು ಖಂಡಿಸಿದ ಮಹಾರಾಷ್ಟ್ರದ ಮಾನವ ಹಕ್ಕುಗಳ ಆಯೋಗ, ನೋಟಿಸ್ ಜಾರಿ ಮಾಡಿದೆ.
ಆಸ್ಪತ್ರೆಯ ಡೀನ್ ಆಗಿರುವ ಪಿನಾಕಿನ್ ಗುಜ್ಜರ್ಗೆ ಕಾರಣಕೇಳಿ ನೋಟಿಸ್ ನೀಡಲಾಗಿದ್ದು, ಸೆಪ್ಟಂಬರ್ 7ರ ವಳಗೆ ಸಂಪೂರ್ಣ ವರದಿ ನೀಡುವಂತೆ ನೋಟಿಸ್ನಲ್ಲಿ ನಮೂದಿಸಿದೆ. ಆದರೆ, ರಿಯಾ ಅವರ ಆಗಮನವನ್ನು ಡೀನ್ ಗುಜ್ಜರ್ ತಳ್ಳಿಹಾಕಿದ್ದಾರೆ.
ಇದನ್ನೂ ಓದಿ: ಮುಗಿಸಿಬಿಡ್ತೀನಿ ಅಂತ ಸುಶಾಂತ್ಗೆ ಧಮ್ಕಿ ಹಾಕಿದ ಸ್ಟಾರ್ ಯಾರು?
ಈಗಾಗಲೇ ಸುಶಾಂತ್ ಸಾವಿಗೆ ರಿಯಾ ಚಕ್ರವರ್ತಿ ಕಾರಣ ಎಂಬ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಈ ನಡುವೆ ಸುಶಾಂತ್ ಶವಪರೀಕ್ಷೆ ವೇಳೆ ರಿಯಾಗೆ ಆಸ್ಪತ್ರೆಯೊಳಕ್ಕೆ ಪ್ರವೇಶ ನೀಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತಿದ್ದು, ಹಲವು ಅನುಮಾನಗಳಿಗೂ ಎಡೆಮಾಡಿಕೊಟ್ಟಿದೆ. (ಏಜೆನ್ಸೀಸ್)