More

    ಫ್ರೂಟ್ ಇರ್ಫಾನ್ ಶೂಟೌಟ್​ ಕೇಸ್; ಬಚ್ಚಾಖಾನ್​ ಸೇರಿ 14 ಆರೋಪಿಗಳು ಕೋಟ್೯ಗೆ ಹಾಜರು

    ಹುಬ್ಬಳ್ಳಿ: ಧಾರವಾಡದ ರೌಡಿಶೀಟರ್​ ಫ್ರೂಟ್​ ಇರ್ಫಾನ್ ಶೂಟೌಟ್​ ಪ್ರಕರಣದ ವಿಚಾರಣೆಗಾಗಿ ಭೂಗತ ಪಾತಕಿ ಯೂಸೂಫ್ ಬಚ್ಚಾಖಾನ್​ ಸೇರಿದಂತೆ 14 ಆರೋಪಿಗಳು ಇಲ್ಲಿನ 4ನೇ ಅಧಿಕ ದಿವಾಣಿ ಮತ್ತು ಸತ್ರ ನ್ಯಾಯಾಲಯ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾಗಿದ್ದರು. ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿತು.
    ಧಾರವಾಡದ ಅಫ್ತಾಬ್ ಬೇಪಾರಿ, ತೌಸಿಫ್ ನಿಪ್ಪಾಣಿ, ಅತಿಯಾಬ್​ಖಾನ್​ ತಡಕೋಡ, ಹುಬ್ಬಳ್ಳಿಯ ಅಮೀರ್​ ತಮಾಟಗಾರ, ಧಾರವಾಡದ ಮೊಹಿನುದ್ದೀನ್​ ಪಟೇಲ್​, ಮುಂಬೈ ಮೂಲದ ಯೂಸೂಫ್ ಬಚ್ಚಾಖಾನ್​, ಮುಂಬೈನ ನೀಲೇಶ ನಂದಗಾವ್ಕರ, ಅನೂಪಸಿಂಗ್​ ಸಿಂಗಿಲಾಲ್​, ಮಾಮು ಅಲಿಯಾಸ್​ ಸುನೀಲ ಬನ್ಸೋಡೆ, ನವನಾಥ ದಲಾಸ್​, ಮೈಸೂರಿನ ಶಹಜಾನ್​ ಅಶ್ರಫ್, ಸೈಯದ್​ ಸೊಹೈಲ್​ ಪೀರ್​, ರಾಜೇಂದ್ರ ರಾವತ್​, ಧಾರವಾಡದ ಮಹಮ್ಮದ್​ ಹ್ಯಾರಿಶ್​ ಪಠಾಣ ನ್ಯಾಯಾಲಯಕ್ಕೆ ಹಾಜರಾಗಿದ್ದರು.
    ಹಳೇ ಹುಬ್ಬಳ್ಳಿ ಅಲ್​ ತಾಜ್​ ಸಭಾ ಭವನದ ಬಳಿ 2020ರ ಆಗಸ್ಟ್​ 6ರಂದು ರೌಡಿಶೀಟರ್​ ಫ್ರೂಟ್​ ಇರ್ಫಾನ್ ನನ್ನು ಶೂಟ್​ ಮಾಡಿ ಹತ್ಯೆಗೈಯಲಾಗಿತ್ತು. ಈ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರೀತಿ.ಕೆ. ಅವರು ಮುಂದಿನ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದರು. ಜಿಲ್ಲಾ ನ್ಯಾಯಾಧೀಶರು ಮುಂದಿನ ವಿಚಾರಣೆ ನಡೆಸಲಿದ್ದಾರೆ.
    ಪ್ರತ್ಯೇಕ ಚಾರ್ಜ್​ಶೀಟ್​
    ಪ್ರಕರಣದ 11ನೇ ಆರೋಪಿ ಮುಂಬೈನ ಅವಿನಾಶ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ವಿಷಯವಾಗಿ ಹಳೇ ಹುಬ್ಬಳ್ಳಿ ಪೊಲೀಸರು ಪ್ರತ್ಯೇಕ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts