More

    ಏಪ್ರಿಲ್​ ಆರಂಭದಿಂದಲೇ ಕರೊನಾದಿಂದ ಭಾರತೀಯರಿಗೆ ಮುಕ್ತಿ: ಭರವಸೆ ತಂದ ಹೊಸ ಸಂಶೋಧನಾ ವರದಿ!

    ನವದೆಹಲಿ: ತಾಪಮಾನ ಮತ್ತು ಡೆಡ್ಲಿ ಕರೊನಾ ವೈರಸ್​ ನಡುವಿನ ಸಂಪರ್ಕದ ಬಗ್ಗೆ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಭಾರತೀಯರ ಪಾಲಿಗೆ ಗುಡ್​ ನ್ಯೂಸ್​ ಒಂದನ್ನು ನೀಡಿದ್ದಾರೆ.

    ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಸದ್ಯದ ಗುಡುಗು ಸಹಿತ ಮಳೆಯಂತಹ ಚಟುವಟಿಕೆಯಿಂದಾಗಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್​ ಇದೆ. ಈ ವಾರ ದೇಶದ ಬಹುತೇಕ ಭಾಗಗಳಲ್ಲಿ ಇದೇ ವಾತಾವರಣ ಮುಂದುವರಿದಿದೆ. ಏಪ್ರಿಲ್​ ಆರಂಭದಿಂದ ಬೇಸಿಗೆ ಕಾಲ ಆರಂಭವಾಗಲಿದ್ದು, ಕರೊನಾ ವೈರಸ್​ ಹರಡುವಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈ ಬಗ್ಗೆ ಸರ್ಕಾರ ಮತ್ತು ವಿಜ್ಞಾನಿಗಳು ತುಂಬಾ ಭರವಸೆ ಇಟ್ಟಿದ್ದು, ಇದರೊಟ್ಟಿಗೆ 21 ದಿನಗಳ ಲಾಕ್​ಡೌನ್​ ಏಪ್ರಿಲ್​ ಮಧ್ಯಭಾಗದಲ್ಲಿ ಕೊನೆಗೊಳ್ಳುವುದರಿಂದ, ಇದೂ ಕೂಡ ಭಾರತೀಯರ ಪಾಲಿಗೆ ವರವಾಗಲಿದೆ. ವೈರಸ್​ ಹರಡುವಿಕೆ ನಿಧಾನವಾಗಿ ಕೊನೆಗೊಳ್ಳುವ ಸಾಧ್ಯತೆ ಇದೆ ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.

    ಪಶ್ಚಿಮ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಈ ವಾರ ಕೆಲವಡೆ ಭಾರಿ ಪ್ರಮಾಣದ ಗುಡುಗುಸಹಿತ ಮಳೆಯನ್ನು ಹೊತ್ತು ತಂದಿದೆ. ಬೆಟ್ಟ-ಗುಡ್ಡಗಳ ಮೇಲೆ ಹಿಮ ಬಿದ್ದಿರುವುದರಿಂದ ಸಹಜವಾಗಿಯೇ ತಾಪಮಾನ ವಾರದ ಆರಂಭದಲ್ಲೆ ಇಳಿಕೆಯಾಗಿದೆ. ಮತ್ತೊಂದು ಸುತ್ತಿನ ಗುಡುಗು ಸಹಿತ ಮಳೆ ಮಾರ್ಚ್​ 30ರೊಳಗೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಮಹೇಶ್​​ ಪಾಲಾವತ್​ ಹೇಳಿದ್ದಾರೆ.

    ತಾಪಮಾನ ಏರಿಕೆಯ ಟ್ರೆಂಡ್​​ ಏಪ್ರಿಲ್​ ತಿಂಗಳ ಆರಂಭದಲ್ಲಿ ಮುಂದುರಿಯುವ ನಿರೀಕ್ಷೆಗಳಿವೆ. ಗರಿಷ್ಠ 30 ಡಿಗ್ರಿ ಸೆಲ್ಸಿಯಸ್​ನಿಂದ ಮಧ್ಯ ಏಪ್ರಿಲ್​ನಲ್ಲಿ 40 ಡಿಗ್ರಿಯವರೆಗೂ ತಾಪಮಾನ ಏರಿಕೆಯಾಗಲಿದೆ. ಉತ್ತರ ಭಾಗದಲ್ಲಿ ತೇವಾಂಶದ ಮಟ್ಟ ಕಳಮಟ್ಟದಲ್ಲೇ ಉಳಿಯಲಿದ್ದು, ಕರಾವಳಿ ಪ್ರದೇಶಗಳಲ್ಲಿ ಉಷ್ಣ ಮತ್ತು ತೇವಾಂಶ ಇರಲಿದೆ. ಈ ಎಲ್ಲ ಸಂಗತಿಗಳು ಕರೊನಾ ಕುಟುಂಬದ ವಿರುದ್ಧ ಹೋರಾಡಲಿವೆ ಎಂದು ಪಾಲಾವತ್​ ತಿಳಿಸಿದ್ದಾರೆ.

    ಕೆಲವು ಅಧ್ಯಯನಗಳ ಪ್ರಕಾರ ಹೊಸ ಕರೊನಾ ವೈರಸ್​ಗಳಲ್ಲಿ ಕಾಲೋಚಿತತೆಯನ್ನು ಗುರುತಿಸಲಾಗಿದ್ದು, ಶತಮಾನಗಳಿಂದ ಮಾನವರಲ್ಲಿ ಚಾಲ್ತಿಯಲ್ಲಿರುವ ಅದರ ಆನುವಂಶಿಕ ಗುಣಗಳು ಕಂಡುಬಂದಿದೆ. ಹೀಗಾಗಿ ಇವುಗಳು ಡಿಸೆಂಬರ್​ ಮತ್ತು ಏಪ್ರಿಲ್ ನಡುವೆ ಹೆಚ್ಚು ಆವಿಯಾಗುವ ಸಾಧ್ಯತೆ ಇದೆ. ಈ ಒಂದು ಕಾರಣದಿಂದಾಗಿ ಮೇ ಮತ್ತು ಜೂನ್​ ತಿಂಗಳಿನಲ್ಲಿ ಪ್ರಸ್ತುತ ಇರುವ ಪ್ರಭಾವಕ್ಕಿಂತಲೂ ತುಂಬಾ ಕಡಿಮೆ ಇರಲಿದೆ ಎಂದು ನಂಬಲಾಗಿದೆ.

    ಇದೇ ವೇಳೆ ಕೋವಿಡ್​ -19 ಬೆಳವಣಿಗೆಯ ಟ್ರೆಂಡ್​ ಬಗ್ಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ(ಎಂಐಟಿ) ಸಂಶೋಧಕರ ಪ್ರಾಥಮಿಕ ಅಧ್ಯಯನದ ಪ್ರಕಾರ ಅತಿಯಾದ ಉಷ್ಣ ವಲಯಗಳಲ್ಲಿ ಕರೊನಾ ಪ್ರಕರಣಗಳು ತುಂಬಾ ಕಡಿಮೆ ಇರುವುದನ್ನು ತೋರಿಸಿದೆ. ಅಲ್ಲದೆ, ಅತಿ ಹೆಚ್ಚು ವೈರಸ್​ ಹರಡುವಿಕೆ ಅಂದರೆ ಶೇ. 90 ರಷ್ಟು ಮಾರ್ಚ್ 22ರವರೆಗೆ ಸಂಭವಿಸಿದೆ. ಈ ಸಮಯದಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್​ನಿಂದ 17 ಡಿಗ್ರಿ ಇತ್ತು. ಆರ್ದ್ರತೆಯ ಮಟ್ಟ ಪ್ರತಿ ಘನ ಮೀಟರ್‌ಗೆ ಗ್ರಾಂ 4 ರಿಂದ 9 ಇತ್ತೆಂದು ಅಧ್ಯಯನ ಸೂಚಿಸಿದೆ.

    ಭಾರತದಲ್ಲಿ ಮಾರ್ಚ್​ ತಿಂಗಳಲ್ಲಿ ತಾಪಮಾನ ಕಡಿಮೆ ಇದ್ದುದರಿಂದ ಸೋಂಕಿತರ ಪ್ರಕರಣಗಳು ವೇಗವಾಗಿ ಏರಿಕೆಯಾಗಿವೆ. ಇದಕ್ಕೆ ಯೂರೋಪ್​ ಒಂದು ಒಳ್ಳೆಯ ಉದಾಹರಣೆಯಾಗಿದ್ದು, ಅಲ್ಲಿ ಒಳ್ಳೆಯ ಆರೋಗ್ಯ ಸೇವೆ ಇದ್ದರೂ ಪ್ರಕರಣ ಹಾಗೂ ಸಾವಿನ ಸಂಖ್ಯೆ ಅಧಿಕವಾಗುವುದಕ್ಕೆ ತಾಪಮಾನ ಕಡಿಮೆಯೇ ಕಾರಣ ಎಂದು ನಂಬಲಾಗಿದೆ. (ಏಜೆನ್ಸೀಸ್​)

    2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕರೊನಾ ಸೋಂಕು: ಕಾರಣ ಕೇಳಿದ್ರೆ ದಂಗಾಗ್ತೀರಾ!

    ಜಮ್ಮ ಕಾಶ್ಮೀರ ಮಾಜಿ ಸಿಎಂ ಉಮರ್​ ಅಬ್ದುಲ್ಲಾರನ್ನು ಕೊಂಡಾಡಿದ ಪ್ರಧಾನಿ ಮೋದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts