More

    ಅಶ್ವತ್ಥ ನಾರಾಯಣ ವಿರುದ್ಧ ಸಿದ್ದು ಅಭಿಮಾನಿಗಳ ಕಿಡಿ

    ಹೊಸಪೇಟೆ: ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ನೀಡಿರುವ ಹೇಳಿಕೆ ಖಂಡಿಸಿ ಮಂಗಳವಾರ ಸಿದ್ದರಾಮಯ್ಯ ಅಭಿಮಾನಿ ಬಳಗದ ಸದಸ್ಯರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಹಸೀಲ್ದಾರ್ ವೃತ್ತದವರೆಗೆ ಪ್ರತಿಭಟನೆ ನಡೆಸಿ, ಗ್ರೇಡ್-2 ತಹಸೀಲ್ದಾರ್ ವೆಂಕಟೇಶ ಆಶ್ರಿತ್‌ಮನವಿ ಸಲ್ಲಿಸಿದರು.

    ಡಾ.ಅಶ್ವತ್ಥನಾರಾಯಣ ಅವರು ರಾಜ್ಯ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದರೂ, ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅದರಲ್ಲೂ ಚುನಾವಣೆ ಸಮಯದಲ್ಲಿ ಕೋಮು ಗಲಭೆ ಉಂಟಾಗುವಂತೆ ಜಾತಿಗಳ ಮಧ್ಯೆ ಜಗಳ ಹಚ್ಚುವುದು, ಭಯದ ವಾತಾವರಣ ಸೃಷ್ಟಿಸುವುದು ಅವರ ದುರುದ್ದೇಶ ಎಂದು ದೂರಿದರು.

    ಜನಪರ ಆಡಳಿತ ಹಾಗೂ ಉತ್ತಮ ಬಜೆಟ್ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯರ ವ್ಯಕ್ತಿತ್ವವನ್ನು ರಾಜ್ಯದಲ್ಲೇ ಪ್ರಶಂಸಿಸಲಾಗುತ್ತದೆ. ಹಲವು ಬಾರಿ ಜನಪರ ಬಜೆಟ್ ಮಂಡಿಸಿದ ಹಿರಿಮೆ ಅವರಿಗಿದೆ. ಯಾವ ಇತಿಹಾಸದ ಪುಸ್ತಕದಲ್ಲಿಯೂ ಊರಿಗೌಡ-ನಂಜೇಗೌಡ ಹೆಸರು ಇಲ್ಲದಿದ್ದ ಸಮಯದಲ್ಲಿ ಅಲ್ಲಿರುವ ಒಂದು ಜನಾಂಗದ ಮತವನ್ನು ಸೆಳೆಯುವುದಕ್ಕೊಸ್ಕರ ಜಾತಿ ವಿಷಬೀಜ ಬಿತ್ತಲಿಕ್ಕೆ ಈ ಹೇಳಿಕೆ ನೀಡಿದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ಸಿದ್ದರಾಮಯ್ಯ ಅಭಿಮಾನಿ ಬಳಗದ ಜಿ.ಗೋಪಾಲಕೃಷ್ಣ, ಜೊಂಡಿ ಲಿಂಗಪ್ಪ, ಬಿಸಾಟಿ ತಾಯಪ್ಪ, ಜಂಬಣ್ಣ ಮೇಟಿ, ಬಸಲಿಂಗಪ್ಪ ಎಸ್.ಮೇಟಿ, ಜಿ.ವಿನಾಯಕ, ರಾಘವೇಂದ್ರ ಸಂಕ್ಲಾಪುರ, ದಮ್ಮೂರು ಮಂಜುನಾಥ, ಬೊಲ್ಲೂರ ಬಿ.ಯಂಕೋಬಿ, ಡಿ.ಭೀಮೇಶಿ, ಕೇಶವ, ಗಂಟೆ ಉಮೇಶ, ಜಡಿಯಪ್ಪ, ಹನುಮಂತ ಡಿ, ಕೆ.ಸಿದ್ದಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts