ಬೆಂಗಳೂರು: ಡೆಲಿವರಿ ಬಾಯ್ ಊಟ ಲೇಟಾಗಿ ತಂದ ಎನ್ನುವ ಕಾರಣಕ್ಕೆ ಆತನನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ, ಸಿಬ್ಬಂದಿಯ ಸ್ಪಷ್ಟನೆ ಕಾದ ಯುವತಿಯೊಬ್ಬಳು ಮುಖಕ್ಕೆ ಪಂಚ್ ಹೊಡೆಸಿಕೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಹಿತೇಶಾ ಚಂದ್ರಾಣಿ ಹೆಸರಿನ ಯುವತಿ ಮಂಗಳವಾರ ಮಧ್ಯಾಹ್ನ ಊಟವನ್ನು ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ್ದಾಳೆ. 3-30ರ ಸಮಯಕ್ಕೆ ಊಟ ಡೆಲಿವರಿ ಆಗುವುದಾಗಿ ಆ್ಯಪ್ನಲ್ಲಿ ತಿಳಿಸಲಾಗಿದೆ. ಆದರೆ ಡೆಲಿವಿ ಬಾಯ್ ಕಾಮರಾಜ್ 4-30ಕ್ಕೆ ಫುಡ್ ಡೆಲಿವರಿ ಮಾಡಲು ಆಕೆಯ ಮನೆ ಬಾಗಿಲಿಗೆ ಬಂದಿದ್ದಾನೆ. ಅದಾಗಲೇ ಹಿತೇಶಾ ಜೊಮ್ಯಾಟೋ ಸಿಬ್ಬಂದಿಗೆ ಫುಡ್ ಡೆಲಿವರಿ ಲೇಟಾಗಿರುವ ಬಗ್ಗೆ ಮಾಹಿತಿ ನೀಡಿದ್ದಳಂತೆ. ಕಾಮರಾಜ್ ಮನೆ ಬಾಗಿಲಿಗೆ ಬಂದಾಗ, ಆತನನ್ನು ಅಲ್ಲಿಯೇ ನಿಲ್ಲಿಸಿ, ಆರ್ಡರ್ ಕ್ಯಾನ್ಸಲ್ ಮಾಡಿರುವುದಾಗಿ ಆತನಿಗೆ ಹೇಳಿದ್ದಾನೆ.
ಹಾಗೆ ಹೇಳಿದ ಹಿತೇಶಾ ಬಾಗಿಲು ಹಾಕಿಕೊಳ್ಳಲು ಪ್ರಯತ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಕಾಮರಾಜ್, ಬಾಗಿಲನ್ನು ದೂಡಿ, ಮನೆಯೊಳಗೆ ಹೋಗಿ ಊಟವನ್ನು ಇಟ್ಟು ಬಂದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಿನ್ನ ಗುಲಾಮ ನಾನಲ್ಲ ಎಂದು ಕಾಮರಾಜ್ ಬೈದಿದ್ದಾನೆ. ಆತನ ವರ್ತನೆಯಿಂದ ಸಿಟ್ಟಿಗೆದ್ದ ಹಿತೇಶಾ ಕೈಗೆ ಚಪ್ಪಲಿ ಎತ್ತಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ಆತ ಆಕೆಯ ಮುಖಕ್ಕೆ ಪಂಚ್ ಮಾಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ. ಮೂಗಿನಿಂದ ರಕ್ತ ಬರುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾಳೆ.
ಹಿತೇಶಾ ಇನ್ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ಎನಿಸಿಕೊಂಡಿದ್ದಾಳೆ. ಇನ್ಸ್ಟಾಗ್ರಾಂನಲ್ಲಿ ಆಕೆಗೆ 35 ಸಾವಿರಕ್ಕೂ ಅಧಿಕ ಅಭಿಮಾನಿಗಳಿದ್ದಾರೆ.
ಈ ಫೋಟೋದಲ್ಲಿರುವವರು ರಾಜ್ಯವೊಂದರ ಮಾಜಿ ಮುಖ್ಯಮಂತ್ರಿ! ಯಾರೆಂದು ಗುರುತಿಸಿ ಹೇಳಿ..
VIDEO| 60ರ ವೃದ್ಧನ 2ನೇ ಮದುವೆಗೆ ಒಪ್ಪದ ಮಕ್ಕಳು! ವಿದ್ಯುತ್ ಕಂಬವೇರಿ ಕುಳಿತ ವೃದ್ಧ