More

    ರಂಜಾನ್​ ಹಿನ್ನೆಲೆ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆ ಮೆರೆದ ಹಿಂದು-ಮುಸ್ಲಿಂ ಬಾಂಧವರು

    ಬಾಗಲಕೋಟೆ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು ತಿಂಗಳುಗಳ ಕಾಲ ನಡೆಯುವ ಉಪವಾಸ ವ್ರತದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಮುಸ್ಲಿಂ ಸಮಾಜದವರಿಗೆ ಇಫ್ತಿಯಾರ್​ ಕೂಟ ಆಯೋಜನೆ ಮಾಡಲಾಗಿತ್ತು.

    ಬಾಗಲಕೋಟೆಯ ನವನಗರದ ಈದ್ಗಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ್​ ಕೂಟದಲ್ಲಿ ಹಿಂದು-ಮುಸ್ಲಿಂ ಬಾಂಧವರಿಬ್ಬರು ಭಾಗಿಯಾಗುವ ಮೂಲಕ ಭಾವೈಕ್ಯತೆಯನ್ನು ಮೆರೆದರು.

    ಇದನ್ನೂ ಓದಿ: 50 ಲಕ್ಷ ಖರ್ಚು, ಅದ್ಧೂರಿ ಮದ್ವೆ: ಹಣದಾಹಿ IAS ಗಂಡನ ವಿರುದ್ಧ ದೂರು, ನಿವೃತ್ತ ಡಿಐಜಿ ಪುತ್ರಿಯ ಕಣ್ಣೀರ ಕತೆಯಿದು

    ಪರಸ್ಪರ ಶುಭ
    ಇಪ್ತಿಯಾರ್​ ಕೂಟ ಆರಂಭಕ್ಕೂ ಮೊದಲು ಸ್ಥಳೀಯ ಈದ್ಗಾ ಮಸೀದಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ನಂತರ ಹಿಂದು-ಮುಸ್ಲಿಂ ಬಾಂಧವರಿಬ್ಬರೂ ಪರಸ್ಪರ ಶುಭ ಕೋರಿ ಇಫ್ತಿಯಾರ್​ ಕೂಟದಲ್ಲಿ ಭಾಗಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

    ಅಂದಹಾಗೆ ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ನಸುಕಿನಿಂದ ಸಂಜೆಯವರೆಗೆ ಉಪವಾಸ ಮಾಡುತ್ತಾರೆ. ಒಂದು ಹನಿ ನೀರು ಕುಡಿಯದೆ ತಮ್ಮ ಕಾಯಕವನ್ನೂ ಮಾಡುತ್ತಾರೆ. ಏಪ್ರಿಲ್​ 21ರಂದು ರಂಜಾನ್​ ಉಪವಾಸಕ್ಕೆ ತೆರೆ ಬೀಳಲಿದೆ.

    ಬೆಳಗ್ಗೆಯಿಂದ ಬೆಂಗಳೂರು KSR ರೈಲು ನಿಲ್ದಾಣಕ್ಕೆ ಆಗಮಿಸದ ರೈಲುಗಳು: ಪ್ರಯಾಣಿಕರ ಪರದಾಟ

    ಚಿನ್ನದ ಝರಿ ನೇಯ್ಗೆ ಇರುವ ಸೀರೆಯನ್ನು ದೇವರಿಗೆ ಅರ್ಪಿಸಿದ ಭಕ್ತ!

    ನಾಯಿ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ; ಹತ್ಯೆಗೆ ಸಾಥ್ ನೀಡಿದ ಆರೋಪದ ಮೇಲೆ ಪತ್ನಿಯೂ ಅಂದರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts