More

    ಶಾಲೆಯಲ್ಲೇ ನಡೆಯುತ್ತಿತ್ತಾ ಮತಾಂತರ ಯತ್ನ?; ಕ್ರಿಸ್​​ಮಸ್​ಗೆ ಕಾನ್ವೆಂಟ್​​ಗೆ ಬರಲೇಬೇಕೆಂದು ಮಕ್ಕಳಿಗೆ ಒತ್ತಾಯ, ಹಿಂದೂ ಕಾರ್ಯಕರ್ತರ ದಾಳಿ..

    ಮಂಡ್ಯ: ಕ್ರಿಸ್​ಮಸ್​ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತಧರ್ಮದತ್ತ ಸೆಳೆಯಲು ಯತ್ನಿಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಾನ್ವೆಂಟ್​ವೊಂದರ ಮೇಲೆ ದಾಳಿ ನಡೆಸಿದ್ದಾರೆ. ಮಾತ್ರವಲ್ಲ, ಅಲ್ಲಿನ ಕ್ರಿಸ್​ಮಸ್​ ಆಚರಣೆಗೂ ಆಕ್ಷೇಪ ಒಡ್ಡಿದ್ದಾರೆ.

    ಮಂಡ್ಯ ಜಿಲ್ಲೆಯ ಪಾಂಡವಪುರದ ನಿರ್ಮಲಾ ಕಾನ್ವೆಂಟ್​ನಲ್ಲಿ ಇಂಥದ್ದೊಂದು ಮತಾಂತರ ಪ್ರಯತ್ನದ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕಾನ್ವೆಂಟ್​ನಲ್ಲಿ ಕ್ರಿಸ್​ಮಸ್ ಆಚರಣೆಗೆ ಹಾಜರಿರಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕ್ರಿಸ್​ಮಸ್​ ನೆಪದಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮದತ್ತ ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ. ಇದರಿಂದ ಮಕ್ಕಳ ನಡವಳಿಕೆಯಲ್ಲೂ ಬದಲಾವಣೆ ಕಂಡುಬರುತ್ತಿದೆ ಎಂದು ದಾಳಿ ನಡೆಸಿದ ಕಾರ್ಯಕರ್ತರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಸಂಕ್ರಾಂತಿಯೊಳಗೆ ದೇಶದಲ್ಲಿ ಮತ್ತೊಂದು ದೊಡ್ಡ ದುರಂತ!?; ಕೋಡಿಮಠದ ಶ್ರೀಗಳಿಂದ ಭವಿಷ್ಯ

    ಶಾಲಾ-ಕಾಲೇಜುಗಳು ಧರ್ಮಾತೀತವಾಗಿರಬೇಕು. ನಿರ್ಮಲಾ ಕಾನ್ವೆಂಟ್​​ನಲ್ಲಿ ಕ್ರಿಸ್​ಮಸ್​ ಆಚರಣೆ ಮೂಲಕ ಧರ್ಮಪ್ರಚಾರ ಮಾಡಲಾಗುತ್ತಿದೆ. ಕ್ರಿಸ್​ಮಸ್​ ಆಚರಣೆ ಮಾಡಲೇಬೇಕು ಎನ್ನುವುದಾದರೆ ಹಿಂದೂ ದೇವರ ಫೋಟೋ ಕೂಡ ಹಾಕಿ ಎಂದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಲಾ ಆಡಳಿತ ಮಂಡಳಿ ಮತ್ತು ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    Video | ಚಳಿಗೆ ಮೈ ಕಾಯಿಸಿಕೊಳ್ಳಲು ಅಡುಗೆ ಮನೆಗೇ ಬಂದ ಕಾಳಿಂಗ ಸರ್ಪ!

    ಲಸಿಕೆ ತಗೊಂಡಿದ್ದರೂ, ಆ್ಯಂಟಿಬಾಡಿ ಚಿಕಿತ್ಸೆ ಪಡೆದಿದ್ದರೂ ಒಮಿಕ್ರಾನ್​ ಬರಬಹುದು!; ಏಕೆಂದರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts