ಹೈದರಾಬಾದ್: ಪ್ರೀತಿ ಎಂದರೆ ನಂಬಿಕೆ. ಯಾವಾಗ ಪ್ರೀತಿಯಲ್ಲಿ ನಂಬಿಕೆ ದ್ರೋಹವಾಗುತ್ತದೋ ಅದು ಸಾವಿಗೂ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ದುರಂತ ಕತೆಯೇ ಸಾಕ್ಷಿಯಾಗಿದೆ. ತಾನೂ ಮನಸಾರೆ ಪ್ರೀತಿಸಿದ ಯುವಕನ ಮುಖವಾಡ ಕಳಚಿ ಬಿದ್ದಾಗ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.
- ರತ್ನಕುಮಾರಿ (24) ಮೃತ ಯುವತಿ. ಈಕೆ ಖಮ್ಮಮ್ ಜಿಲ್ಲೆಯ ಮಲಬಂಜಾರಾ ಗ್ರಾಮದ ನಿವಾಸಿ. ಖಮ್ಮಮ್ನಲ್ಲಿ ದೋಬಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಗೆ ಖಮ್ಮಮ್ ಮೂಲದ ಆಟೋ ಚಾಲಕ ಸಂಜಯ್ ಪರಿಚಯವಾಗಿತ್ತು.
ಆದರೆ, ಸಂಜಯ್ಗೆ ಈಗಾಗಲೇ ಮದುವೆ ಆಗಿತ್ತು. ವಾಸ್ತವವನ್ನು ಮರೆಮಾಚಿ ರತ್ನ ಕುಮಾರಿಗೆ ದ್ರೋಹವೆಸಗುತ್ತಿದ್ದ. ಮದುವೆ ಆಗಿರುವ ವಿಚಾರ ರತ್ನಕುಮಾರಿಗೆ ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಈ ವಿಚಾರ ರತ್ನಕುಮಾರಿಗೆ ತಿಳಿದಿದು ಭಾರಿ ಆಘಾತ ಅನುಭವಿಸಿದ್ದಳು. ಆದರೆ, ಈ ನೋವಿನಿಂದ ಹೊರಬಾರದ ರತ್ನಕುಮಾರಿ ಮಾರ್ಚ್ 9ರಂದು ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾಳೆ. ಮಾರ್ಚ್ 10ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದಕ್ಕೂ ಮುನ್ನ ನೋವಿನಿಂದ ಒದ್ದಾಡುತ್ತಿದ್ದ ಆಕೆಯನ್ನು ಪಾಲಕರು ಖಮ್ಮಮ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ. ಇದೀಗ ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. (ಏಜೆನ್ಸೀಸ್)
ಹುಟ್ಟುವಾಗ್ಲೇ 2 ಜನನಾಂಗ ಹೊಂದಿರುವ ಈಕೆ ಸಂದರ್ಶನದಲ್ಲಿ ಬಿಚ್ಚಿಟ್ಟ ಮಾಹಿತಿ ಕೇಳಿದ್ರೆ ಶಾಕ್ ಆಗ್ತೀರಾ!