More

    ಶ್ರೀ ಶಾಂತ ಶಿವಯೋಗಿಗಳ ವೈಭವದ ರಥೋತ್ಸವ

    ಯಾದಗಿರಿ: ಹೆಡಗಿಮದ್ರಾ ಗ್ರಾಮದಲ್ಲಿ ಭಾನುವಾರ ಸಂಜೆ ಶ್ರೀ ಶಾಂತ ಶಿವಯೋಗಿಗಳ ರಥೋತ್ಸವ ಭಕ್ತರ ಜೈಘೊಷಗಳ ಮಧ್ಯೆ ವೈಭವದಿಂದ ಜರುಗಿತು.

    ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ ನೇತೃತ್ವದಲ್ಲಿ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ರಥೋತ್ಸವದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಪಾಲ್ಗೊಂಡಿದ್ದು ವಿಶೇಷ. ಸಾವಿರಾರು ಭಕ್ತಸಮೂಹದ ಮಧ್ಯೆ ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಶ್ರೀ ಶಾಂತಶಿವಯೋಗಿ ಮಹಾರಾಜಕೀ ಜೈ ಜೈಘೋಷ ಮೊಳಗಿದವು. ಭಕ್ತರು ರಥದ ಮೇಲೆ ಖಾರೀಕು, ಉತ್ತತ್ತಿ, ಬಾಳೆಹಣ್ಣು ಎಸೆದು ಹರಕೆ ತೀರಿಸಿದರು.

    ಬೆಳಗ್ಗೆ ಶ್ರೀಮಠದಲ್ಲಿ ಶಾಂತ ಶಿವಯೋಗಿಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ಬಳಿಕ ಪಲ್ಲಕ್ಕಿ ಮೆರವಣಿಗೆ ನಡೆಯಿತು. 15 ದಿನಗಳಿಂದ ಮಠದಲ್ಲಿ ಪ್ರತಿನಿತ್ಯ ರಾತ್ರಿ 8ಕ್ಕೆ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಕುರಿತ ಪ್ರವಚನ ಹಾಗೂ ತನಾರತಿ ಕಾರ್ಯಕ್ರಮ ಜರುಗಿತು. ಜಾತ್ರೆಯಲ್ಲಿ ಬೆಂಡು-ಬತಾಸು, ಬಿಸಿಬಿಸಿ ಸುಸಲಾ ಮತ್ತು ಭಜ್ಜಿ ತಿಂದು ಭಕ್ತರು ತಮ್ಮೂರಿಗೆ ವಾಪಸಾದರು.

    ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಪ್ರಮುಖರಾದ ರಾಚನಗೌಡ ಮುದ್ನಾಳ್, ನಿಂಗಾರಡ್ಡಿ ಬಾಸರಡ್ಡಿ ನಾಲವಾರ, ಜಿ.ಲಲ್ಲೇಶರಡ್ಡಿ, ಕಿಶನರಾವ್ ಮಾಲಿಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts