ಮಂಡ್ಯ: ಸತತ ಒಂದು ಗಂಟೆಗಳ ಕಾಲ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ಕೆ.ಆರ್.ಪೇಟೆ KSRTC ಬಸ್ ನಿಲ್ದಾಣ ತುಂಬೆಲ್ಲಾ ನೀರು ತುಂಬಿಕೊಂಡು ಕೆರೆಯಂತಾಗಿದೆ.
ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಬಸ್ ಸಂಚಾರಕ್ಕೆ ಅಡ್ಡಿಯಾಗಿದ್ದು, ಮಳೆನೀರು ತುಂಬಿಕೊಂಡಿದ್ದರಿಂದ ಬಸ್ ಹತ್ತಲು ಜನರು ಪರದಾಡುವಂತಾಯಿತು.
ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ. ಕೆ.ಆರ್.ಪೇಟೆ ನಿಲ್ದಾಣ ಮಾತ್ರ ಕೆಲಕಾಲ ಬಸ್ ನಿಲ್ದಾಣವೋ ಅಥವಾ ಕೆರೆಯೋ ಎಂಬಂತೆ ಭಾಸವಾಗಿತ್ತು. (ದಿಗ್ವಿಜಯ ನ್ಯೂಸ್)
ಮನಕಲಕುವ ದೃಶ್ಯ: ಗಂಭೀರ ಗಾಯಗೊಂಡ ತಾಯಿಯನ್ನು ಬಿಟ್ಟು ಹೋಗದ ಮರಿ ಕೋತಿ!