ಕೊಪ್ಪಳ: ಅಪಘಾತದಲ್ಲಿ ನರಳುತ್ತಿದ್ದ ತಾಯಿಯನ್ನು ಬಿಟ್ಟು ಹೋಗದ ಕೋತಿ ಮರಿಯು ನರಳಾಡುವ ಘಟನೆ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿ ನಡೆದಿದೆ.
ವಾಹನಕ್ಕೆ ಸಿಲುಕಿದ ತಾಯಿ ಕೋತಿ ಗಂಭೀರವಾಗಿ ಗಾಯವಾಗಿತ್ತು.ಗಾಯಗೊಂಡರೂ ತಾಯಿಯನ್ನು ಬಿಟ್ಟು ಹೋಗದ ಮರಿ ಕೋತಿ ಕೆಲ ಕಾಲ ನರಳಾಡಿದೆ. ಈ ದೃಶ್ಯ ಎಲ್ಲರ ಮನಕಲುಕಿದೆ.
ತಾಯಿ ಕೋತಿಯ ಸ್ಥಿತಿ ಕಂಡು ಕಣ್ಣೀರು ಹಾಕಿದ ಮರಿ ಕಣ್ಣೀರು ಹಾಕಿದೆ. ನಂತರ ಗಾಯಗೊಂಡ ಕೋತಿಯನ್ನು ಸ್ಥಳೀಯರು ಹಾರೈಕೆ ಮಾಡಿದ್ದಾರೆ.ನಂತರ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿ ಕೋತಿಯನ್ನು ರಕ್ಷಿಸಿದ್ದಾರೆ.
ರಾಮಾಯಣದ ಸ್ಥಳಗಳಿಗೆ ನೀವೊಮ್ಮೆ ಸುತ್ತಿಬನ್ನಿ, 18 ದಿನಗಳಲ್ಲಿ ಎಂಟು ಸಾವಿರ ಕಿ.ಮೀ ಸಂಚರಿಸಲಿದೆ ಈ ರೈಲು!