ಮೈಸೂರು : ಬೈಲಕುಪ್ಪೆ ತಾಲೂಕು ರೋಟರಿ ಮಿಡ್ ಟೌನ್, ಲಕ್ಷ್ಮೀ ಹೆಲ್ತ್ ಕೇರ್ ಸೆಂಟರ್ನಿಂದ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹರವೆಯ ಒಂದನೇ ಬ್ಲಾಕ್ನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಬುಧವಾರ ಆರೋಗ್ಯ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ರೋಟರಿ ಮಿಡ್ ಟೌನ್ ತಾಲೂಕು ಅಧ್ಯಕ್ಷ ತಿರುಮಲ ಪುರದ ರಾಜೇಗೌಡ, ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ದೊಡ್ಡ ಹರಿವೆ ರಾಜಯ್ಯ ಮಾತನಾಡಿದರು. ಗ್ರಾಪಂ ಸದಸ್ಯೆ ಭಾರತಿ ಪ್ರಕಾಶ್, ಮುಖಂಡರಾದ ವೈ.ಕೆ.ಹೆಗ್ಗಡೆ, ಹೇಮೇಶ್, ಬಸವಗೌಡ, ಜಗನ್, ಸಣ್ಣಯ್ಯ ಇತರರು ಇದ್ದರು.