More

    ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ

    ಸಂಕೇಶ್ವರ: ಮನುಷ್ಯನಿಗೆ ಆರೋಗ್ಯ ಅಮೂಲ್ಯವಾಗಿದ್ದು, ಅದನ್ನು ಚೆನ್ನಾಗಿ ಕಾಪಾಡಿಕೊಂಡರೆ ಬೆಟ್ಟದಷ್ಟು ಸಾಧಿಸಬಹುದು ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವ ಲಿಂಗೇಶ್ವರ ಸ್ವಾಮೀಜಿ ಹೇಳಿದ್ದಾರೆ. ಪಟ್ಟಣದ ಸುನ್ನತ ಜಮಾತ್ ಕಮಿಟಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಔಷಧೋಪಚಾರ ಪೂರೈಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಮಿಟಿ ವತಿಯಿಂದ ಕರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದು ಮಾದರಿ ಕಾರ್ಯ ಎಂದರು. ಅಭಿನವ ಸಚ್ಚಿದಾನಂದ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಡಾ.ಮಂದಾರ ಹಾವಳ, ಡಾ.ರಮೇಶ ದೊಡಭಂಗಿ, ಡಾ.ವಿಕಾಸ ಪಾಟೀಲ, ಡಾ.ಚೇತನ ಕಂಕಣವಾಡಿ, ಡಾ.ಸಮಿವುಲ್ಲಾ ಅಲ್ಲಾಖಾನ, ಡಾ.ಸರ್ಫರಾಜ ಗಡೇಕಾಯಿ, ಡಾ.ಗುರು ಪಾಟೀಲ, ಡಾ.ಜುಬೇರ್ ಬಾರಗೀರ, ಡಾ.ಓಂಕಾರ ಗಾರ್ಡೆ, ಡಾ.ಸಮೀರ ಮುಲ್ಲಾ, ಡಾ.ಶಾಹೀದ್ ಗಡೇಕಾಯಿ, ಡಾ.ಜಹೂರ್ ಮುಲ್ಲಾ, ಡಾ.ಆಸ್ಮಾ ಗಡೇಕಾಯಿ, ಡಾ. ಜೈಬಾ ಗಡೇಕಾಯಿ 143 ರೋಗಿಗಳನ್ನು ತಪಾಸಿಸಿ, ಔಷಧೋಪಚಾರ ನೀಡಿದರು. ವೈದ್ಯರನ್ನು ಶ್ರೀಗಳು ಸತ್ಕರಿಸಿದರು. ಕಮಿಟಿ ಅಧ್ಯಕ್ಷ ಹಾಜಿ ಹುಸೇನಸಾಬ ಮೋಕಾಶಿ ಅಧ್ಯಕ್ಷತೆ ವಹಿಸಿದ್ದರು. ಇಲಿಯಾಸ ಮುಲ್ಲಾ, ಅಲ್ಲಾವುದ್ದೀನ್ ಕಳಾವಂತ, ಹಾರುಣ ಮುಲ್ಲಾ, ಆಶೀಫ್ ಗಜೇಂದ್ರಗಡ, ಅಸ್ಲಂ ಲಂದೂ, ಬಾಬಾಸಾಹೇಬ ನಾಗನೂರೆ ಇದ್ದರು. ನಾಸೀರ್ ಜಮಾದಾರ ಸ್ವಾಗತಿಸಿ, ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts