ಕೊಚ್ಚಿ: ಮಲಯಾಳಂ ನಟಿ ಅಹಾನಾ ಕೃಷ್ಣ ಅವರು ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ನಡೆದ ಕಹಿ ಘಟನೆ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ನಟಿಯ ಮನೆಯನ್ನು ಅತಿಕ್ರಮ ಪ್ರವೇಶ ಮಾಡಿ ಭೀತಿ ಉಂಟುಮಾಡಿದ್ದನ್ನು ಅಹಾನಾ ವಿವರಿಸಿದ್ದಾರೆ.
ಇದನ್ನೂ ಓದಿರಿ: ಗದ್ದೆಯಲ್ಲಿ ಅತ್ತಿಗೆ ಮೈದುನನ ಚಕ್ಕಂದ! ಸರಸದಲ್ಲಿದ್ದ ಜೋಡಿಯನ್ನು ಕೊಚ್ಚಿ ಕೊಂದ ಗಂಡ!
ಮಲಪ್ಪುರಂ ಮೂಲದ ಯುವಕ ಫಾಸಿಲ್, ಅಹಾನಾರ ಮನೆಯನ್ನು ಅತಿಕ್ರಮ ಪ್ರವೇಶಸಿ ಬಂಧಿಯಾಗಿದ್ದಾನೆ. ಆತನನ್ನು ಮಾನಸಿಕ ಅಸ್ವಸ್ಥ ಎನ್ನಲಾಗಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.
ಅಂದಹಾಗೆ ಈ ಘಟನೆ ಭಾನುವಾರ ಬೆಳಗ್ಗೆ 10 ಗಂಟೆಗೆ ನಡೆದಿದೆ. ಅಭಿಮಾನಿ ಎಂದು ಹೇಳಿಕೊಂಡು ಮನೆ ಹತ್ತಿರ ಬಂದ ಫಾಸಿಲ್, ಭೇಟಿಯಾಗಲು ಬಂದಿರುವುದಾಗಿ ತಿಳಿಸಿದ. ಮನೆಯ ಗೇಟ್ ತೆರೆಯಲು ಒಪ್ಪದಿದ್ದಾಗ ಸಭ್ಯ ವ್ಯಕ್ತಿಗಳು ಗೇಟ್ ಹಾರಿ ಬರುವ ಪ್ರಯತ್ನ ಮಾಡುವುದಿಲ್ಲ ಅಂದುಕೊಂಡೆ. ಆದರೆ, ಫಾಸಿಲ್ ನೋಡಲು ಸ್ವಲ್ಪ ಮಾನಸಿಕವಾಗಿ ಸರಿಯಿಲ್ಲ ಎಂದು ಅನಿಸಿದಾಗ ಗೇಟ್ ತೆಗೆಯಲು ಬಯಸಲಿಲ್ಲ. ತಕ್ಷಣ ಆತ ಗೇಟ್ ಹಾರಿ ಮನೆಯೊಳಗೆ ನುಗ್ಗಲು ಯತ್ನಿಸಿದ ಎಂದು ಅಹಾನಾ ಬರೆದುಕೊಂಡಿದ್ದಾರೆ. ಆದರೆ, ನಾನಿಲ್ಲಿ ಫಾಸಿಲ್ ಮಾನಸಿಕ ಸ್ಥಿತಿ ಬಗ್ಗೆ ತೀರ್ಪು ನೀಡುತ್ತಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಯಾವಾಗ ಫಾಸಿಲ್ ಗೇಟ್ ಹಾರಿದನೋ ಅಹಾನಾ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೇವಲ 15 ನಿಮಿಷದಲ್ಲಿ ಅಹಾನಾ ಮನೆಗೆ ಬಂದ ಪೊಲೀಸರು ಫಾಸಿಲ್ನನ್ನು ವಶಕ್ಕೆ ಪಡೆದು ಕರೆದೊಯ್ದರು. ವಿಚಾರಣೆ ವೇಳೆ ಅಹಾನಾರನ್ನು ಮದುವೆ ಆಗಬೇಕೆಂದು ಬಯಸಿರುವುದಾಗಿ ಫಾಸಿಲ್ ಪೊಲೀಸರಿಗೆ ತಿಳಿಸಿದ್ದಾನೆಂದು ಅಹಾನಾ ಮಾಹಿತಿ ನೀಡಿದರು.
ಮುಂದುವರಿದು ಮಾತನಾಡಿ, ನನ್ನ ಇಡೀ ಕುಟುಂಬ ಭಯಭೀತಗೊಂಡಿತ್ತು. ನಿಜ ಜೀವದಲ್ಲಿ ಸಿನಿಮಾ ರೀತಿಯ ಘಟನೆಯನ್ನು ನಾವೆಂದು ನಿರೀಕ್ಷಿಸಿರಲಿಲ್ಲ. ನಿಜಕ್ಕೂ ಇದೊಂದು ದುಃಖಕರ ಪರಿಸ್ಥಿತಿಯಾಗಿತ್ತು ಎಂದು ಹೇಳಿದ್ದಾರೆ. ಅಲ್ಲದೆ, ಈ ಘಟನೆಯನ್ನು ರಾಜಕೀಯ ಹಾಗೂ ಕೋಮುವಾದೀಕರಿಸಬೇಡಿ ಎಂದು ನಟಿ ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ: ಸರ್ಕಾರಿ ನೌಕರನೆಂದು ಮದ್ವೆಯಾದವಳಿಗೆ ನಿತ್ಯ ನರಕ ದರ್ಶನ: ಗಂಡನ ಮೊಬೈಲ್ ನೋಡಿ ಪತ್ನಿಗೆ ಶಾಕ್!
ಇತ್ತೀಚೆಗಷ್ಟೇ ಕರೊನಾ ಪಾಸಿಟಿವ್ ಬಂದಿದ್ದರಿಂದ ಅಹಾನಾ ಪ್ರತ್ಯೇಕವಾಗಿದ್ದಾರೆ. ಇನ್ನು ಫಾಸಿಲ್ನನ್ನು ಪೊಲೀಸ್ ಠಾಣೆಯಿಂದ ಕರೆದೊಯ್ಯಲು ಆತನ ಕುಟುಂಬ ಮುಂದೆಬರುತ್ತಿಲ್ಲ. ಆತನೇನಾದರೂ ಮಾದಕ ವ್ಯಸನಿಯೇ ಎಂಬ ಆಯಾಮದಲ್ಲೂ ತನಿಖೆ ಮಾಡುತ್ತಿದ್ದಾರೆ. (ಏಜೆನ್ಸೀಸ್)
ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್ ಅಧಿಕಾರಿ!
ಗಂಡನ ಕಾಯಿಲೆ ಹೆಚ್ಚಿಸುತ್ತೇನೆಂದು ಹೆದರಿಸಿ ರೇಪ್ ಮಾಡಿದ! ಬಾಬಾನ ನಿಜ ಬಣ್ಣ ಹೊರಗೆಳೆದ ಮಹಿಳೆ
ಓಡಿಹೋದವರ ಖಾಸಗಿ ಭಾಗ ಸುಟ್ಟು ಹತ್ಯೆ! ಪ್ರೇಮಿಗಳನ್ನು ಶಿಕ್ಷಿಸುವುದು ಗಂಭೀರ ಅಪರಾಧ ಎಂದ ಸುಪ್ರೀಂ