More

    ಎಚ್​​ಡಿಕೆ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ : ಸಚಿವ ಈಶ್ವರಪ್ಪ

    ಶಿವಮೊಗ್ಗ : ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ‌ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಅವರ ವರ್ತನೆ‌ ಹೀಗೇ ಮುಂದುವರಿದರೆ, ರಾಜ್ಯದ‌ ಜನರು ಅವರಿಗೆ ಛೀಮಾರಿ ಹಾಕುವ ದಿನ ಬರಲಿದೆ ಎಂದು‌ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

    ಇಂದು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ಸಿಎಂ ಬಿಎಸ್​​ವೈ ಅವರು ದೆಹಲಿಗೆ‌ ಕೊಂಡೊಯ್ದ ಐದಾರು ಬ್ಯಾಗ್​​ನಲ್ಲಿ ಏನಿತ್ತು ಎಂದು ಪ್ರಶ್ನಿಸಿರುವುದು ಕುಮಾರಸ್ವಾಮಿ ಅವರ‌ ಕೀಳು ರಾಜಕೀಯಕ್ಕೆ ನಿದರ್ಶನವಾಗಿದೆ ಎಂದು ಕಿಡಿಕಾರಿದರು.

    ಇದನ್ನೂ ಓದಿ: ಹೈಕಮಾಂಡ್​ಗೆ ಕೊಡಲೆಂದು ಸಿಎಂ ಯಡಿಯೂರಪ್ಪ 6 ಸೂಟ್​ ಕೇಸ್​ನಲ್ಲಿ ದೆಹಲಿಗೆ ಕೊಂಡೊಯ್ದದ್ದೇನು?: ಎಚ್​ಡಿಕೆ

    ರಾಜ್ಯದ ನಾಲ್ವರು ನೂತನವಾಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರನ್ನು ಅಭಿನಂದಿಸಲು ಹಾರ, ಸ್ಮರಣಿಕೆಯನ್ನು ಐದಾರು ಬ್ಯಾಗ್​​ಗಳಲ್ಲಿ ಕೊಂಡೊಯ್ದರೆ, ಅದಕ್ಕೆ ಎಚ್​​ಡಿಕೆ ಕೊಂಕು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, “ಯಾರಿಂದಲೂ ಏನನ್ನಾದರೂ ಪಡೆಯುವ ವ್ಯಕ್ತಿತ್ವ ಪ್ರಧಾನಿ ನರೇಂದ್ರ ಮೋದಿ ಅವರದ್ದಲ್ಲ‌. ಯಾರಿಗಾದರೂ ಏನನ್ನಾದರೂ ಕೊಟ್ಟು ತೃಪ್ತಿಪಡಿಸುವ ಅನಿವಾರ್ಯತೆ ಸಿಎಂ ಯಡಿಯೂರಪ್ಪ ಅವರಿಗಿಲ್ಲ” ಎಂದರು.

    ಸಚಿವ ಸ್ಥಾನ ಹೋದರೆ ಗೂಟ ಹೋದಂತೆ: ವೈರಲ್​ ಆಡಿಯೋಗೆ ಈಶ್ವರಪ್ಪ ಪ್ರತಿಕ್ರಿಯೆ

    ಮುಂಗಾರು ಅಧಿವೇಶನ: ಸದನದ ಆರಂಭದಲ್ಲೇ ವಿಪಕ್ಷಗಳ ಗದ್ದಲ! ಮುಂದೂಡಲ್ಪಟ್ಟಿತು ಕಲಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts