More

    ಸ್ವಕ್ಷೇತ್ರದಲ್ಲಿ ಸಿಎಂ ಭರ್ಜರಿ ಮತಭೇಟೆ; ಬಾಲ್ಯದ ದಿನಗಳನ್ನು ನೆನೆದು ಬೊಮ್ಮಾಯಿ ಭಾವುಕ

    ಹಾವೇರಿ/ ಶಿಗ್ಗಾಂವಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಸ್ವಕ್ಷೇತ್ರ ಶಿಗ್ಗಾಂವಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮ್ಯಾರಾಥಾನ್ ರೋಡ್ ಶೋ ಮೂಲಕ ಭರ್ಜರಿ ಮತಭೇಟೆ ಆಡಿದರು. ದುಂಡಸಿ ಗ್ರಾಮದ ಸುತ್ತಮುತ್ತ ಬಾಲ್ಯದಲ್ಲಿ ಆಡಿ ಬೆಳೆದ ದಿನಗಳನ್ನು ನೆನೆದು ಭಾವುಕರಾದರು. ಈ ಬಾರಿ ಅತ್ಯಂತ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
    ಶಿಗ್ಗಾಂವಿ ತಾಲೂಕಿನ ತಡಸ, ಕುನ್ನೂರು, ದುಂಡಶಿ, ಹೊಸೂರು, ಕೋಣನಕೇರಿ, ಅಂದಲಗಿ ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತ ಪ್ರಚಾರ ನಡೆಸಿದರು. ಎಲ್ಲೆಡೆ ಸಿಎಂಗೆ ಭರ್ಜರಿ ಸ್ವಾಗತ ದೊರೆಯಿತು. ಸುಡು ಬಿಸಿಲು ಲೆಕ್ಕಿಸದೇ ತೆರೆದ ವಾಹನ ಏರಿ ಹಳ್ಳಿಗಳಿಗೆ ತೆರಳಿ ಜನರನ್ನು ಭೇಟಿಯಾದರು. ಎಲ್ಲ ಗ್ರಾಮಗಳಲ್ಲಿ ಭಾಷಣ ಮಾಡುವ ಮೂಲಕ ಗಮನ ಸೆಳೆದರು. ಮಾರ್ಗ ಮಧ್ಯೆ ಆತ್ಮೀಯರ ಮನೆಗಳು ಹಾಗೂ ತೋಟಗಳಿಗೆ ಭೇಟಿ ಕೊಟ್ಟು ಕುಶಲೋಪರಿ ವಿಚಾರಿಸಿದರು. ನನ್ನ ಕ್ಷೇತ್ರದಲ್ಲಿ ಈ ಬಾರಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿಲ್ಲ, ಕ್ಷಮಿಸಿ. ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ಇದನ್ನು ಜನರಿಗೆ ಮುಟ್ಟಿಸಿ. ನನ್ನ ಪರವಾಗಿ ನೀವೇ ಪ್ರಚಾರ ಮಾಡಿ ಎಂದು ಕರೆ ಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts