ಹಾವೇರಿ: ಇಲ್ಲಿನ ಜಿಲ್ಲಾಡಳಿತದ ಪರಿಶ್ರಮದ ಫಲವಾಗಿ ರಾಜ್ಯದಲ್ಲೇ ಅತಿಹೆಚ್ಚು ಅಂದರೆ 126 ಕೋಟಿ ರೂ. ಮಧ್ಯಂತರ ಬೆಳೆವಿಮೆ ಪರಿಹಾರ ಹಾವೇರಿ ಜಿಲ್ಲೆಗೆ ಜಮೆಯಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು. ತ್ರೈಮಾಸಿಕ ಕೆಡಿಪಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಗೆ 26 ಕೋಟಿ ರೂ., ಶಿವಮೊಗ್ಗಕ್ಕೆ 6.52 ಕೋಟಿ ರೂ., ಬಾಗಲಕೋಟೆಗೆ 2.72 ಕೋಟಿ ರೂ. ಮದ್ಯಂತರ ಬೆಳೆವಿಮೆ ಪರಿಹಾರ ದೊರೆತಿದ್ದರೆ, ಹಾವೇರಿ ಜಿಲ್ಲೆಗೆ 126.75 ಕೋಟಿ ರೂ. ದೊರೆತಿದೆ. ಜಿಲ್ಲೆಯ ರೈತರು, ಜಿಲ್ಲಾಡಳಿತದ ಸಹಕಾರದಿಂದ ಇದು ಸಾಧ್ಯವಾಗಿದೆ. ಈಗಾಗಲೇ 40 ಕೋಟಿ ರೂ. ರೈತರ ಖಾತೆಗೆ ಜಮೆಯಾಗಿದ್ದು, ಉಳಿದ ಹಣ ಶೀಘ್ರದಲ್ಲೇ ಜಮೆಯಾಗಲಿದೆ. ಇದರಿಂದ ರೈತರಿಗೆ ಸ್ವಲ್ಪ ತೃಪ್ತಿ ದೊರೆತಿದೆ ಎಂದರು.
ನಬಾರ್ಡ್ಗೆ 4,500 ಕೋಟಿ ಕೊಡಿ
ಕೇಂದ್ರ ಸರ್ಕಾರಕ್ಕೆ ನಮ್ಮ ರಾಜ್ಯ ಸೇರಿ ಬೇರೆ ರಾಜ್ಯಗಳಿಂದ ಬರ ಪರಿಹಾರದ ಕುರಿತು ಪ್ರಸ್ತಾವನೆ ಹೋಗಿದೆ. ಈ ಬಗ್ಗೆ ಕೇಂದ್ರದವರು ಪರಾಮರ್ಷೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ಕೂಡಲೇ ರಾಜ್ಯದ ಪಾಲು ಸೇರಿಸಿ ಕೊಡಲಾಗುವುದು. ಕೇಂದ್ರ ಸರ್ಕಾರ ನಬಾರ್ಡ್ಗೆ ಏಪ್ರಿಲ್ನಲ್ಲೇ 4,500 ಕೋಟಿ ರೂ. ಕೊಡಬೇಕಿತ್ತು. ಈವರೆಗೂ ಬಂದಿಲ್ಲ. ಇದರಿಂದ ನಬಾರ್ಡ್ನಿಂದ ಡಿಸಿಸಿ ಬ್ಯಾಂಕ್ಗೆ ಹಣ ಕೊಟ್ಟಿಲ್ಲ. ಹಾಗಾಗಿ, ರೈತರಿಗೆ ಬೆಳೆಸಾಲ ಸಿಗುತ್ತಿಲ್ಲ. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲವಲ್ಲ ಎಂದು ಸಚಿವ ಶಿವಾನಂದ ಪಾಟೀಲ ಕಿಡಿಕಾರಿದರು.
ಬೆಳೆವಿಮೆ ಮದ್ಯಂತರ ಪರಿಹಾರದಲ್ಲಿ ಹಾವೇರಿ ಮೊದಲು; ಹಾವೇರಿ 126, ಕೊಪ್ಪಳಕ್ಕೆ 26, ಶಿವಮೊಗ್ಗಕ್ಕೆ 6 ಕೋಟಿ ರೂ. ಜಮೆ; ಸಚಿವ ಶಿವಾನಂದ ಪಾಟೀಲ

You Might Also Like
ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…
ಪಿರಿಯಡ್ಸ್ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips
ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…
ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic
garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…