ಹಾವೇರಿ: ನಗರದ ಕೆಎಲ್ಇ ಕೊಳ್ಳಿ ಪಾಲಿಟೆಕ್ನಿಕ್ ಮೈದಾನದಲ್ಲಿ ಭಾನುವಾರ ಪೊಲೀಸ್ ಹಾಗೂ ಪ್ರೆಸ್ ತಂಡದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಜರುಗಿತು.
ಭಾರಿ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೆ ಪೊಲೀಸ್ ತಂಡಕ್ಕೆ ಗೆಲುವು ಲಭಿಸಿತು.
ಎಸ್ಸ್ಪಿ ಅಂಶುಕುಮಾರ, ಎಎಸ್ಪಿ ಸಿ. ಗೋಪಾಲ, ಡಿವೈಎಸ್ಪಿಗಳಾದ ಎನ್.ಎಸ್. ಪಾಟೀಲ, ಮಂಜುನಾಥ, ಪತ್ರಕರ್ತರಾದ ನಾರಾಯಣ ಹೆಗಡೆ, ವೀರೇಶ ಮಡ್ಲೂರ, ಕೇಶವಮೂರ್ತಿ ವಿ.ಬಿ., ಪಕ್ಕೀರಯ್ಯ ಗಣಾಚಾರಿ, ಸುರೇಶ ನಾಯಕ, ರವಿ ಹೂಗಾರ, ಮತ್ತಿತರು ಇದ್ದರು.