More

    ಗ್ರಾಹಕರ ಹೆಸರಿಗೆ ಟ್ರ್ಯಾಕ್ಟರ್ ವರ್ಗಾಯಿಸಲು ಸೂಚನೆ

    ಹಾವೇರಿ: ಗ್ರಾಹಕರ ಹೆಸರಿಗೆ ಟ್ರ್ಯಾಕ್ಟರ್ ವರ್ಗಾಯಿಸಲು ಮತ್ತು ವಾಹನದ ಚಾಲ್ತಿ ಅವಧಿಯಲ್ಲಿರುವ ವಿಮಾ ಪಾಲಿಸಿ ನೀಡುವಂತೆ ಟ್ರಾೃಕ್ಟರ್ ಶೋರೂಮ್ ಒಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ ನೀಡಿದೆ.
    ಬ್ಯಾಡಗಿ ತಾಲೂಕು ಧೂಳಿಕೊಪ್ಪದ ಬಸವರಾಜ ಚನ್ನಪ್ಪ ಬಣಕಾರ ಅವರ ಪುತ್ರ ಆದರ್ಶ ಬಣಕಾರ ರಾಣೆಬೆನ್ನೂರಿನ ಶೋರೂಮ್ ಒಂದರಲ್ಲಿ 2 ಡಿಸೆಂಬರ್, 2021ರಂದು ಟ್ರ್ಯಾಕ್ಟರ್ ಖರೀಸಿದ್ದರು. ಟ್ರ್ಯಾಕ್ಟರ್‌ನ ದೊಡ್ಡ ಗಾಲಿಯ ಒಂದು ಟೈರ್ ಒಡೆದು ಹಾಳಾಗಿತ್ತು. ಶೋರೂಮ್‌ನವರು ಟ್ರ್ಯಾಕ್ಟರ್ ಟೈರ್ ಬದಲಾಯಿಸದ ಹಿನ್ನೆಲೆಯಲ್ಲಿ ಹಾಗೂ ವಾಹನ ನೋಂದಣಿ ಮಾಡಿಸದ ಕಾರಣ ಮತ್ತು ಆರ್.ಸಿ. ಪುಸ್ತಕ ನೀಡದ ಕಾರಣ ಆದರ್ಶ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಬಿ.ಎಸ್.ಈಶ್ವರಪ್ಪ ಹಾಗೂ ಮಹಿಳಾ ಸದಸ್ಯೆ ಉಮಾದೇವಿ ಹಿರೇಮಠ ನೇತೃತ್ವದ ತಂಡ, ವಿಶ್ವಾಸಾರ್ಹ ಪ್ರಮಾಣ ಪತ್ರ ಪಡೆದ 40 ದಿನದೊಳಗಾಗಿ ಯಾವುದೇ ಶುಲ್ಕ ಪಡೆಯದೇ ಟ್ರ್ಯಾಕ್ಟರ್‌ಅನ್ನು ಬಸವರಾಜ ಬಣಕಾರ ಅಥವಾ ಆದರ್ಶ ಬಣಕಾರ ಹೆಸರಿಗೆ ನೋಂದಾಯಿಸಿ, ನೊಂದಣಿ ಪ್ರಮಾಣಪತ್ರ ಹಾಗೂ ವಾಹನದ ಚಾಲ್ತಿಯ ಅವಧಿಯಲ್ಲಿರುವ ವಿಮಾ ಪಾಲಿಸಿಯನ್ನು ನೀಡಬೇಕು. ಸೇವಾ ನ್ಯೂನ್ಯತೆಗಾಗಿ 10 ಸಾವಿರ ರೂ. ದಂಡ ಕಟ್ಟುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts