More

    ಬಿಜೆಪಿ ಕಾರ್ಯಾಲಯದಲ್ಲಿ ವೀರ ಬಾಲ ದಿವಸ ಆಚರಣೆ

    ಹಾವೇರಿ: ನಗರದ ಜಿಲ್ಲಾ ಕಾರ್ಯಾಲಯದಲ್ಲಿ ಮಂಗಳವಾರ ಗುರು ಗೋವಿಂದ ಸಿಂಗ್ ಅವರ ಇಬ್ಬರು ಮಕ್ಕಳಾದ ಸಾಹಿಬ್ ದಾದಾ ಬಾಬಾ ಜೋರಾವರ್ ಸಿಂಗ್ ಹಾಗೂ ಸಾಹಿಬ್ ದಾದಾ ಫತೇಹ್ ಸಿಂಗ್ ಅವರ ವೀರ ಮರಣದ ಸ್ಮರಣಾರ್ಥವಾಗಿ ರಾಷ್ಟ್ರೀಯ ವೀರ ಬಾಲ ದಿವಸ ಆಚರಿಸಲಾಯಿತು.
    ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಮಾತನಾಡಿ, ಗುರು ಗೋವಿಂದ್ ಸಿಂಗ್ ಅವರ ಪುತ್ರರಾದ ಸಾಹಿಬ್ಜಾದಾಸ್ ಬಾಬಾ ಜೊರಾವರ್ ಸಿಂಗ್ ಮತ್ತು ಬಾಬಾ ಫತೇಹ್ ಸಿಂಗ್ ಹುತಾತ್ಮರಾದ ಸ್ಮರಣಾರ್ಥವಾಗಿ ಡಿ.26ರಂದು ‘ವೀರ ಬಾಲ ದಿವಸ’ ಆಚರಿಸುವುದಾಗಿ ಘೋಷಿಸಿದ್ದಾರೆ ಎಂದರು.
    ತೀವ್ರ ಶೌರ್ಯ ಮತ್ತು ತ್ಯಾಗದ ವಿಷಯಕ್ಕೆ ಬಂದಾಗ ವಯಸ್ಸು ಮುಖ್ಯವಲ್ಲ ಎಂಬುದನ್ನು ವೀರ ಬಾಲ ದಿವಸ ನಮಗೆ ನೆನಪಿಸುತ್ತದೆ. ವೀರ ಬಾಲ ದಿವಸ ಹತ್ತು ಸಿಖ್ ಗುರುಗಳ ಅಪಾರ ಕೊಡುಗೆ ಮತ್ತು ರಾಷ್ಟ್ರದ ಗೌರವವನ್ನು ರಕ್ಷಿಸಲು ಸಿಖ್ ಸಂಪ್ರದಾಯದ ತ್ಯಾಗವನ್ನು ನೆನಪಿಸುತ್ತದೆ. ವೀರ ಬಾಲ ದಿವಸ ಭಾರತ ಎಂದರೇನು ಮತ್ತು ಅದರ ಅಸ್ಮಿತೆ ಏನು ಎಂಬುದನ್ನು ನಮಗೆ ತಿಳಿಸುತ್ತದೆ ಎಂದರು.
    ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ, ಜಿಲ್ಲಾ ಕಾರ್ಯದರ್ಶಿ ಡಾ.ಸಂತೋಷ ಆಲದಕಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ ಪಾಲನಕರ, ಜಿಲ್ಲಾ ಮಾಧ್ಯಮ ಸಂಚಾಲಕ ಕಿರಣ ಕೋಣನವರ, ವಿನಯ ತಹಶೀಲ್ದಾರ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts