ಹಟ್ಟಿಚಿನ್ನದಗಣಿ: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಐತಿಹಾಸಿಕ ದಿನವಾಗಿದೆ. 500 ವರ್ಷದ ಕನಸು ನನಸಾದ ದಿನವನ್ನು ಐತಿಹಾಸಿಕ ಘಟನೆಯನ್ನಾಗಿಸಬೇಕೆಂದು ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ್ ಬೆಳಗಲ್ ಹೇಳಿದರು.
ಹಟ್ಟಿಯಲ್ಲಿ ಸಾರ್ವಜನಿಕರಿಗೆ ಅಯೋಧ್ಯೆ ಅಕ್ಷತೆ ಹಾಗೂ ಶ್ರೀರಾಮನ ಭಾವಚಿತ್ರಗಳನ್ನು ನೀಡಿ ಸೋಮವಾರ ಮಾತನಾಡಿದರು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರದಿಂದ ರಾಮಾಯಣದ ವೈಭವ ದೇಶದಲ್ಲಿ ಮರುಕಳಿಸಲಿದೆ. ದೇವಸ್ಥಾನ ಉದ್ಘಾಟನೆಯನ್ನು ಅತ್ಯಂತ ವಿಜೃಂಭಣೆಯಿಂದ ಸಂಭ್ರಮಿಸಬೇಕೆಂದು ಕರೆ ನೀಡಿದರು.